ಕಾಂಗ್ರೇಸ್ ಅವರದು ಗೂಂಡಾ ಸಂಸ್ಕೃತಿ : ಆರ್.ಆಶೋಕ್

ಬೆಂಗಳೂರು,ಜ.20- ಬಿಡದಿಯ ಈಗಲ್‍ಟನ್ ರೆಸಾರ್ಟ್‍ನಲ್ಲಿರುವ ಕಾಂಗ್ರೆಸ್ ಶಾಸಕರು ಕುಡಿದು ಹೊಡೆದಾಡಿಕೊಂಡು ರಾಜ್ಯದ ಮಾನ ಮರ್ಯಾದೆ ಹರಾಜಾಕಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಆರೋಪಿಸಿದ್ದಾರೆ.

ಶಾಸಕ ಆನಂದ್ ಸಿಂಗ್ ಅವರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಗೂಂಡಾ ಸಂಸ್ಕøತಿ ಎಂದರೆ ಅದು ಕಾಂಗ್ರೆಸ್ ಸಂಸ್ಕøತಿ ಎಂಬುದು ಈ ಘಟನೆಯಿಂದ ಜಗಜ್ಜಾಹೀರಾಗಿದೆ.

ಜನಪ್ರತಿನಿಧಿಗಳು ಕುಡಿತದ ಹಾವಳಿಯನ್ನು ತಪ್ಪಿಸಬೇಕು.ಅವರಿಂದ ಆಗುವ ಅನಾಹುತಗಳ ಬಗ್ಗೆ ಕ್ರಮ ಕೈಗೊಳ್ಳಬೇಕು. ಆದರೆ ಅವರೇ ಕುಡಿದು ಬಡಿದಾಡಿ ಕೊಂಡಿರುವುದು ನಾಚಿಕೆಗೇಡಿನ ವಿಷಯ ಎಂದು ಅವರು ಹೇಳಿದರು.

ಕುಡಿದ ಮತ್ತಿನಲ್ಲಿ ಆನಂದ್ ಸಿಂಗ್ ಅವರ ಹೊಟ್ಟೆ ಇರಿಯಲಾಗಿದ್ದು, ತಲೆಗೂ ಪೆಟ್ಟಾಗಿದೆ. ಆನಂದ್ ಸಿಂಗ್ ಅವರ ಆರೋಗ್ಯ ವಿಚಾರವನ್ನು ಮರೆ ಮಾಚುತ್ತಿರುವುದನ್ನು ನೋಡಿದರೆ ಅವರು ಜೀವನ್ಮರಣದಲ್ಲಿ ಹೋರಾಡುತ್ತಿರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ