ಸ್ವಗ್ರಾಮಕ್ಕೆ ಬಂದಿದ್ದಯೋಧ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತದಲ್ಲಿ ಸಂಭವಿಸಿ ಸಾವು

ಬೆಳಗಾವಿ, ಜ.19-ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದಯೋಧ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿರುವಘಟನೆ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ನಾಗರಮುನ್ನೋಳಿ ಗ್ರಾಮ ನಿವಾಸಿ ಸಿಕಂದರ್ ಮುಲ್ತಾನಿ (28) ಮೃತಯೋಧ.

ಕಳೆದ 9 ವರ್ಷಗಳಿಂದ ಸಿಕಂದರ್ ಮುಲ್ತಾನಿ ಮದ್ರಾಸ್‍ಎಂಜಿನಿಯರಿಂಗ್‍ಗ್ರೂಪ್‍ಆಫ್ ಸೆಂಟರ್ ಪಂಜಾಬ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಸಿಕಂದರ್ ಮುಲ್ತಾನಿ 40 ದಿನ ರಜೆ ಪಡೆದುಊರಿಗೆ ಬಂದಿದ್ದರು.ಆದರೆ ಶುಕ್ರವಾರ ನಾಗರಮುನ್ನೋಳಿ ಗ್ರಾಮದಿಂದ ಪಕ್ಕದಗ್ರಾಮದಲ್ಲಿ ನಡೆಯುತ್ತಿದ್ದಜಾತ್ರೆಗೆ ಹೋಗಿದ್ದರು.ತಡರಾತ್ರಿ ಮನೆಗೆ ಹಿಂದಿರುಗಿ ವಾಪಸ್ ಬರುವಾಗ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ವಾಹನವನ್ನು ತಪ್ಪಿಸಲು ಹೋಗಿ ಟ್ರಾಕ್ಟರ್‍ನ ಹಿಂಬದಿಗೆ ಬೈಕ್‍ಡಿಕ್ಕಿ ಹೊಡೆದ ಪರಿಣಾಮ ಸಿಕಂದರ್ ಮುಲ್ತಾನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಧಾವಿಸಿದ ಚಿಕ್ಕೋಡಿ ಪೋಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ