ಜ.18 ಮತ್ತು 19ರಂದು ಅಂತಾರಾಷ್ಟ್ರೀಯ ವ್ಯವಹಾರ ಸಮ್ಮೇಳನ

ಬೆಂಗಳೂರು,ಜ.14- ಇಂಟರ್ ನ್ಯಾಷನಲ್ ಬಿಸ್ನೆಸ್ ಸಮಿತ್ ವತಿಯಿಂದ ಇದೇ 18 ಮತ್ತು 19ರಂದು ಯಶವಂಪುರದ ತಾಜ್‍ಹೋಟೆಲ್‍ನಲ್ಲಿ ಬೆಳಗ್ಗೆ 10 ಗಂಟೆಗೆ ಅಂತಾರಾಷ್ಟ್ರೀಯ ವ್ಯವಹಾರ ಸಮ್ಮೇಳನವನ್ನು ಆಯೋಜಿಸಿರುವುದಾಗಿ ಸಂಸ್ಥೆಯ ಮುಖ್ಯಸ್ಥ ಸತೀಶ್ ಕೋಟಾ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕನೆಕ್ಟ್ ಮಿತ್ರ ಬಿಸ್ನೆಸ್ ಯೋಗಿ ಮತ್ತು ಎಸ್‍ಎಂಇ ಕನ್ಸಲ್ಟೆಂಟ್ಸ್ ಇದೇ ಮೊದಲ ಬಾರಿಗೆ ನಗರದಲ್ಲಿ ಸಮ್ಮೇಳನವನ್ನು ಆಯೋಜಿಸಿದ್ದು, ಅಂತಾರಾಷ್ಟ್ರೀಯ ಗ್ರಾಹಕರೊಂದಿಗೆ ಆಮದು, ರಫ್ತು ಚಟುವಟಿಕೆ ಅಥವಾ ಔಟ್ ಸೋರ್ಸಿಂಗ್ ಸೇವೆಗಳ ರೂಪದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ವ್ಯಾಪಾರ ಮಾಡಲು ಬಯಸುವ ಮಾಲೀಕರಿಗೆ ಅವಕಾಶಗಳನ್ನು ಈ ಸಮ್ಮೇಳನ ಕಲ್ಪಿಸಿದೆ ಎಂದು ತಿಳಿಸಿದರು.

ಈ ಸಮ್ಮೇಳನದಲ್ಲಿ 10 ದೇಶಗಳಿಂದ ವಿದೇಶಿ ದೂತವಾಸ, ಅಂತಾರಾಷ್ಟ್ರೀಯ ವಾಣಿಜ್ಯ ಸಂಸ್ಥೆಗಳು, ರಫ್ತುದಾರರು, ವ್ಯಾಪಾರ ಪ್ರತಿನಿಧಿಗಳು ಭಾಗವಹಿಸಲಿದ್ದು, ಕರ್ನಾಟಕದ ಉದ್ಯಮಿಗಳು ಈ ದೇಶಗಳಲ್ಲಿ ಲಭ್ಯವಿರುವ ಅವಕಾಶಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಸಿದ್ದಲಿಂಗಪ್ಪ ಬಿ.ಪೂಜಾರಿ, ಇಸ್ರೋ ಮಾಜಿ ಅಧ್ಯಕ್ಷ ಕಿರಣ್‍ಕುಮಾರ್, ವಿಟಿಪಿಸಿ ನಿರ್ದೇಶಕ ಸತೀಶ್, ಐಇಟಿಒ ಅಧ್ಯಕ್ಷ ಆಸೀಫ್ ಇಕ್ಬಾಲ್ ಸೇರಿದಂತೆ ಇನ್ನಿತರ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಹೆಸರು ನೋಂದಾಯಿಸಿಕೊಳ್ಳಲು www.ibsglobal.biz ವೀಕ್ಷಿಸಿ. ಹೆಚ್ಚಿನ ಮಾಹಿತಿಗಾಗಿ ಮೊ: 7204005399 ಕರೆ ಮಾಡಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ