ಜಾಡಿಸಿ ಒದಿಬೇಕು, ಹುಚ್ಚರು ನೀವು’ ಎಂದು ಮಾಧ್ಯಮದವರ ಮೇಲೆ ಗರಂ ಆದ ರಮೇಶ್​ ಜಾರಕಿಹೊಳಿ!

ಬೆಳಗಾವಿ: “ಒದಿಯಬೇಕು ನಿಮ್ಮನ್ನ ಜಾಡಿಸಿ ಒದಿಯಬೇಕು. ಹುಚ್ಚರು ಇದ್ದೀರಿ ನೀವು, ಅತಿಯಾಯ್ತು ನಿಮ್ದು” ಎಂದು ಕಣ್ಮರೆಯಾಗಿದ್ದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಮಾಧ್ಯಮದವರ ವಿರುದ್ಧ ಹರಿಹಾಯ್ದಿದ್ದಾರೆ.

ಕಳೆದ 10 ದಿನಗಳಿಂದ ಸ್ವತಃ ಕಾಂಗ್ರೆಸ್​ನವರಿಗೇ ಸಿಗದೆ ಕಣ್ಮರೆಯಾಗಿದ್ದ ರಮೇಶ್​ ಜಾರಕಿಹೊಳಿ ಗೋಕಾಕ್ ​ಮಿಲ್​ನಲ್ಲಿರುವ ಮೈದಾನದಲ್ಲಿ ಬ್ಯಾಡ್ಮಿಂಟನ್ ಆಡಿ ನಿವಾಸಕ್ಕೆ ಹಿಂದಿರುಗುವಾಗ ಪ್ರತ್ಯಕ್ಷರಾಗಿದ್ದರು. ಆಗ  ವರದಿಗಾರರು ರಮೇಶ್​ ಅವರ ಮುಂದಿನ ರಾಜಕೀಯ ನಿಲುವುಗಳ ಬಗ್ಗೆ ಪ್ರತಿಕ್ರಿಯೆ ಕೇಳಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಕಾರಿನಿಂದ ಇಳಿಯುತ್ತಿದ್ದಂತೆ ಮಾಧ್ಯಮದವರ ವಿರುದ್ಧ ಈ ರೀತಿ ಗರಂ ಆಗಿ ಮಾತನಾಡಿ, ಯಾವುದೇ ಪ್ರತಿಕ್ರಿಯೆ ನೀಡದೆ ಮನೆಯೊಳಕ್ಕೆ ತೆರಳಿದ್ದಾರೆ.

ಕಳೆದ 10 ದಿನಗಳಿಂದ ಅಜ್ಞಾತವಾಗಿದ್ದ ರಮೇಶ್ ಬುಧವಾರ ಗೋಕಾಕ್​ನ ತಮ್ಮ ನಿವಾಸದಲ್ಲಿ ಪ್ರತ್ಯಕ್ಷರಾಗಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ