ಕೇರಳ ಬಂದ್ ಹಿನ್ನೆಲೆ: ಕೇರಳಕ್ಕೆ ತೆರಳುವ ಬಸ್‍ಗಳ ಸಂಚಾರ ಸ್ಥಗಿತ

ಬೆಂಗಳೂರು,ಜ.3-ಇಬ್ಬರು ಮಹಿಳೆಯರು ಶಬರಿಗಿರಿಯ ಅಯ್ಯಪ್ಪನ ಸನ್ನಿಧಾನ ಪ್ರವೇಶಿಸಿರುವುದನ್ನು ಖಂಡಿಸಿ ಇಂದು ಕೇರಳ ಬಂದ್ ಹಿನ್ನೆಲೆ ರಾಜ್ಯದಿಂದ ಕೇರಳಕ್ಕೆ ತೆರಳುವ ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ನಿನ್ನೆ ಇಬ್ಬರು ಮಹಿಳೆಯರು ಶಬರಿಗಿರಿಯ ಅಯ್ಯಪ್ಪನ ಸನ್ನಿಧಾನವನ್ನು ಪ್ರವೇಶಿಸಿರುವುದನ್ನು ಖಂಡಿಸಿ ಪ್ರತಿಭಟನೆಗಳು ತೀವ್ರಗೊಂಡಿವೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕೇರಳಕ್ಕೆ ತೆರಳುವ 3, ಮಂಗಳೂರಿನಿಂದ ಹೋಗಬೇಕಿದ್ದ 40 ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಂತೆಯೇ ಇತರೆ ಭಾಗಗಳಿಂದ ಕೇರಳಕ್ಕೆ ತೆರಳುವ 20 ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಕೆಎಸ್‍ಆರ್‍ಟಿಸಿ, ಐರಾವತ ಸೇರಿದಂತೆ ಹಲವು ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಮಂಗಳೂರಿನ ಬಸ್ ಜಖಂಗೊಂಡಿದೆ.
ಕಾಸರಗೋಡಿನಲ್ಲೂ ರಾಜ್ಯದ ಬಸ್‍ಗಳ ಮೇಲೆ ಕಲ್ಲು ತೂರಿದ್ದು ಹಾನಿಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ