ಕನ್ನಡ ಚಳುವಳಿಗಾರ ಎಸ್.ಬೈನೋಜಿರಾವ್ ಇಂದು ನಿಧನ

Varta Mitra News

ಬೆಂಗಳೂರು, ಜ.2-ಕನ್ನಡ ಚಳವಳಿಗಾರ ಎಸ್.ಬೈನೋಜಿರಾವ್ (68) ಇಂದು ನಿಧನರಾಗಿದ್ದಾರೆ. 1960 ರಿಂದಲೂ ಕನ್ನಡ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಇವರು, ಕನ್ನಡ ಚಳವಳಿಯಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಾ ಕನ್ನಡದ ಹಿತರಕ್ಷಣೆಗಾಗಿ ದುಡಿದವರು.

ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಹಲವಾರು ಚಳವಳಿಗಳಲ್ಲಿ ಸಕ್ರಿಯರಾಗಿದ್ದ ಇವರು, ಹಲವಾರು ಬಾರಿ ಬಂಧನಕ್ಕೂ ಒಳಗಾಗಿದ್ದರು. ಕಾರ್ಮಿಕ ಮುಖಂಡರೂ ಆಗಿದ್ದ ಇವರು ನಾಡು-ನುಡಿಯ ಸೇವೆಯಲ್ಲಿ ನಿರತರಾಗಿದ್ದರು.

ಇಂದು ಮಧ್ಯಾಹ್ನ ನಗರದ ಚಾಮರಾಜಪೇಟೆಯ ಟಿ.ಆರ್.ಮಿಲ್ ರುದ್ರಭೂಮಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ