ಬುಲಂದರ್ ಶಹರ್ ಪ್ರಕರಣ: ಪೊಲೀಸ್ ಅಧಿಕಾರಿ ಹತ್ಯೆಗೈದ ಮತ್ತೋರ್ವ ಆರೋಪಿ ಬಂಧನ

ಲಖನೌ: ಉತ್ತರಪ್ರದೇಶದ ಬುಲಂದ್​ಶಹರ್​ ನಲ್ಲಿ ನಡೆದಿದ್ದ ಗಲಭೆಯಲ್ಲಿ ಹತ್ಯೆಯಾಗಿದ್ದ ಪೊಲೀಸ್​ ಅಧಿಕಾರಿ ಸುಬೋಧ್​ ಕುಮಾರ್​ ಸಿಂಗ್​ ಅವರ ಮೇಲೆ ಕೊಡಲಿಯಿಂದ ದಾಳಿ ಮಾಡಿದ್ದ ವ್ಯಕ್ತಿಯೊಬ್ಬಯನ್ನು ಪೊಲೀಸರು ಬಂಧಿಸಿದ್ದಾರೆ.

ಇದರೊಂದಿಗೆ ಬುಲಂದ್​ಶಹರ್​ ಪೊಲೀಸ್ ಗಲಭೆಯಲ್ಲಿ ನಡೆದ​ ಅಧಿಕಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದಂತಾಗಿದೆ.

ಬಂಧಿತ ವ್ಯಕ್ತಿಯನ್ನು ಕಲ್ವ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಪೊಲೀಸ್​ ಅಧಿಕಾರಿಯ ಮೇಲೆ ಕೊಡಲಿಯಿಂದ ದಾಳಿ ಮಾಡಿ, ಅವರ ಕೈ ಬೆರಳುಗಳನ್ನು ಕಡಿದಿದ್ದ. ಕೊನೆಗೆ ತಲೆಯ ಮೇಲೂ ಕೊಡಲಿ ಪೆಟ್ಟು ನೀಡಿದ್ದ. ಅದಾದ ನಂತರ ಮತ್ತೊಬ್ಬ ವ್ಯಕ್ತಿ ಪ್ರಶಾಂತ್​ ನತ್ತ್​ ಎಂಬಾತ ಅಧಿಕಾರಿಯದ್ದೇ ಗನ್​ ಕಸಿದು ಶೂಟ್​ ಮಾಡಿ ಕೊಂದಿದ್ದ. ಆತನನ್ನು ಡಿ.28ರಂದು ಪೊಲೀಸರು ಬಂಧಿಸಿದ್ದಾರೆ.

Bulandshahr Cop’s Murder, Accused Who Attacked Him With Axe, Arrested

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ