ನಾಲೆಯಲ್ಲಿ ಈಜಾಡಲು ಹೋಗಿದ್ದ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಸಾವು

ಶಿವಮೊಗ್ಗ,ಡಿ.30- ನಾಲೆಯಲ್ಲಿ ಈಜಾಡಲು ತೆರಳಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಭದ್ರಾವತಿ ತಾಲೂಕಿನ ಗೋಂದಿ ಗ್ರಾಮದಲ್ಲಿ ನಡೆದಿದೆ.
ಸಾಗರ್‍ನಾಯ್ಕ(6), ಮಂಜ ನಾಯ್ಕ(8) ಮೃತಪಟ್ಟ ದುರ್ದೈವಿಗಳು.

ಗೋಂದಿ ಗ್ರಾಮದ ರೇಖ್ಯಾ ನಾಯ್ಕ ಮಂಜಿ ಬಾಯಿ ದಂಪತಿಯ ಪುತ್ರ ಸಾಗರ್ ನಾಯ್ಕ, ಕೃಷ್ಣ ನಾಯ್ಕ, ಸುಮಾ ಬಾಯಿ ದಂಪತಿಯ ಪುತ್ರ ಮಂಜ ನಾಯ್ಕ ಇಬ್ಬರೂ ಈಜಲು ನಿನ್ನೆ ನಾಲೆಗೆ ತೆರಳಿದ್ದರು. ಹೊನ್ನೆಗೌಡ ಹಿಂಭಾಗದಲ್ಲಿರುವ ಗೋಂದಿ ನಾಲೆಯಲ್ಲಿ ಈಜಾಡುತ್ತಿದ್ದ ವೇಳೆ ಇಬ್ಬರೂ ನೀರಿನಲ್ಲಿ ಮುಗಳುಗಿ ಸಾವನ್ನಪ್ಪಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ