ದ್ವಿ ಚಕ್ರ ವಾಹನಗಳ ಮುಖಾ ಮುಖಿ ಡಿಕ್ಕಿ, ಘಟನೆಯಲ್ಲಿ ಒಬ್ಬರ ಸಾವು

ಗೌರಿಬಿದನೂರು, ಡಿ.28-ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿರುವಘಟನೆತಾಲೂಕಿನ ಹೊಸೂರು ಹೋಬಳಿಯ ಕುದುರೆಬಾಲ್ಯ-ರಮಾಪುರ ಗ್ರಾಮಗಳ ಮಧ್ಯದಲ್ಲಿಜರುಗಿದೆ.

ನರಸಿಂಹಮೂರ್ತಿ(40) ಮಧುಗಿರಿತಾಲೂಕಿನ ಕೊಡಗೇನಹಳ್ಳಿ ಮೈದನಹಳ್ಳಿ ಗ್ರಾಮದ ವಾಸಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರು ನಿಮಾನ್ಸ್‍ ಆಸ್ಪತ್ರೆಗೆ ರವಾನಿಸುವಾಗ ಮಾರ್ಗದ ಮಧ್ಯದಲ್ಲಿ ಮೃತಪಟ್ಟಿರುವ ವ್ಯಕ್ತಿಎಂದುಗುರುತಿಸಲಾಗಿದೆ.

ಮತ್ತೊಬ್ಬ ದ್ವಿಚಕ್ರ ವಾಹನ ಸವಾರ ಹೊಸೂರು ಹೋಬಳಿಯ ಕುದುರೆಬ್ಯಾಲದಅಶ್ವತ್ಥಪ್ಪ(26) ಗಂಬೀರವಾಗಿಗಾಯಗೊಂಡು ಸಾರ್ವಜನಿಕಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾನೆ.

ಪ್ರಕರಣವನ್ನುಗ್ರಾಮಾಂತರಠಾಣೆಯಎಸ್‍ಐ ಅವಿನಾಶ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ