ಅಪಹರಣವಾಗಿದ್ದ ಹಸುಗೂಸು ಶವವಾಗಿ ಪತ್ತೆ

ಬೆಂಗಳೂರು,ಡಿ.23- ಅಪಹರಣಕ್ಕೊಳಗಾಗಿದ್ದಒಂದು ತಿಂಗಳ ಹಸುಗೂಸು ಶವವಾಗಿ ಪತ್ತೆಯಾಗಿರುವ ಹೃದಯ ವಿದ್ರಾವಕಘಟನೆ ನಗರದ ವಿವೇಕನಗರದಲ್ಲಿ ನಡೆದಿದೆ.

ದುರುಳರು ಮಂಚದ ಮೇಲೆ ಮಲಗಿದ್ದ ಮಗುವನ್ನು ಅಪಹರಿಸಿ 10 ನಿಮಿಷದಲ್ಲಿ ಉಸಿರುಗಟ್ಟಿಸಿ ಕೊಂದು ಟವೆಲ್‍ನಲ್ಲಿ ಸುತ್ತಿ ಮಂಚದ ಕೆಳಗಿರಿಸಿ ಪರಾರಿಯಾಗಿದ್ದಾರೆ. ಕಳೆದ ಡಿ.21 ರಾತ್ರಿ ನಡೆದಘಟನೆತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಒಂದು ತಿಂಗಳ ಹಿಂದೆಯಷ್ಟೇ ವಿವೇಕನಗರದ ನಿವಾಸಿ ಕಾರ್ತೀಕ್‍ಎನ್ನುವವರಿಗೆ ಅವಳಿ ಮಕ್ಕಳು ಜನಿಸಿದ್ದವು. ಡಿ.21ರ ರಾತ್ರಿ ಒಂದು ಮಗು ತೀವ್ರ ಜ್ವರದಿಂದ ಬಳಲುತ್ತಿತ್ತು. ಹಾಗಾಗಿ ಕಾರ್ತೀಕ್‍ ಮಗುವನ್ನು ಹಾಲ್‍ನಲ್ಲಿದ್ದ ಬೆಡ್ ಮೇಲೆ ಮಲಗಿಸಿ ಔಷಧಿತರಲು ತೆರಳಿದ್ದರು.

ಅದೇ ವೇಳೆ ಅಳುತ್ತಿದ್ದ ಮತ್ತೊಂದು ಮಗುವಿಗೆ ಹಾಲು ಕುಡಿಸಲು ತಾಯಿರೂಂಗೆ ತೆರಳಿದ್ದಾರೆ.ಇದೇ ಸಮಯವನ್ನು ಸಾಧಿಸಿದ ದುರಳರು ಮಗುವನ್ನು ಅಪಹರಿಸಿ ಈ ಹೀನ ಕೃತ್ಯಎಸಗಿದ್ದಾರೆ.

ಹಾಲು ಕುಡಿಸಿ ಹೊರ ಬಂದ ತಾಯಿಗೆ ಮಂಚದ ಮೇಲೆ ಮಗು ಇಲ್ಲದಿರುವುದುಕಂಡಿದೆ. ಗಾಬರಿಗೊಂಡ ಪತ್ನಿಕೂಡಲೇಕಾರ್ತೀಕ್‍ಗೆ ಫೋನ್ ಮಾಡಿ ಬಿಕ್ಕಿ ಬಿಕ್ಕಿಅತ್ತಿದ್ದಾರೆ.

ಅಶೋಕನಗರ ಪೊಲೀಸರಿಗೆ ಮಾಹಿತಿ ನೀಡಿದ ಕಾರ್ತಿಕ್ ಪೊಲೀಸರ ಜೊತೆಗೂಡಿ ಎಲ್ಲೆಡೆ ಹುಡುಕಾಡಿದ್ದಾರೆ. ಕಡೆಗೆ ಮನೆಯಲ್ಲೆಲ್ಲಾ ಹುಡುಕಾಟ ನಡೆಸಿದಾಗ ಮಗುವಿನ ಶವ ಪತ್ತೆಯಾಗಿದೆ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿತನ್ನ ಸಹೋದರ ಹಾಗೂ ತಂದೆಯೇ ಈ ಕೃತ್ಯ ನಡೆಸಿರುವುದಾಗಿ ಕಾರ್ತೀಕ್ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಶೋಕ ನಗರಠಾಣಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ