ಡಿ.22ರಂದು ಕಿದ್ವಾಯಿ ಸ್ಮಾರಕ ಗ್ರಂಥಿ ಆವರಣದಲ್ಲಿ ಕಿರುನಾಟಕೋತ್ಸವ

ಬೆಂಗಳೂರು, ಡಿ.20-ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಡಿ.22 ರಂದು ಮಧ್ಯಾಹ್ನ 1 ಗಂಟೆಗೆ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಆವರಣದಲ್ಲಿ ಕಿರುನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ.

ಕಲಾ ಸಂಘದಿಂದ ಯು.ಗೋವಿಂದೇಗೌಡರ ರಚನೆ ಮತ್ತು ನಿರ್ದೇಶನದ ವಿಕಟ ವಿಲಾಸ ಹಾಗೂ ಮಧ್ಯಾಹ್ನ 2.30ಗಂಟೆಗೆ ತುಮಕೂರಿನ ನಾಟಕ ಮನೆಯ ವತಿಯಿಂದ ನಾಟಕ ಮನೆ ಮಹಾಲಿಂಗು ನಿರ್ದೇಶನದ ಮಾಡಿದ್ದುಣ್ಣೊ ಮಹಾರಾಯ- ಹಾಸ್ಯನಾಟಕಗಳು ಪ್ರದರ್ಶನಗೊಳ್ಳಲಿವೆ.

ಬೆಂಗಳೂರು, ಡಿ.20-ಗಾಂಧೀ ಶಾಂತಿ ಪ್ರತಿಷ್ಠಾನ ವತಿಯಿಂದ ಗಾಂಧಿಯನ್ನು ಅಂತರ್ಗತ ಮಾಡಿಕೊಳ್ಳುವ ಬಗೆ ಎಂಬ ವಿಷಯ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಇದೇ 24 ರಂದು ಗಾಂಧೀ ಭವನದಲ್ಲಿ ಆಯೋಜಿಸಲಾಗಿದೆ.

ಅಂದು ಸಂಜೆ 4.30ಕ್ಕೆ ಗಾಂಧಿಯನ್ನು ಅಂತರ್ಗತ ಮಾಡಿಕೊಳ್ಳುವ ಬಗೆ ಎಂಬುದರ ಕುರಿತು ಲೇಖಕ ಡಾ.ಕೆ.ಸತ್ಯನಾರಾಯಣ ಉಪನ್ಯಾಸ ನೀಡುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ವಹಿಸಲಿದ್ದಾರೆ.ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್ ಪಾಲ್ಗೊಳ್ಳಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ