ಛಲವಾದಿ ಮತ್ತು ಮಾದಿಗ ಜನಾಂಗಕ್ಕೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ ದಲಿತ ಸಂಘರ್ಷ ಸಮಿತಿ

ಬೆಂಗಳೂರು,ಡಿ.3- ರಾಜ್ಯದ ದೊಡ್ಡ ಸಮುದಾಯವಾದ ಛಲವಾದಿ (ಬಲಗೈ) ಜನಾಂಗಕ್ಕೆ ಮತ್ತು ಮಾದಿಗ(ಎಡಗೈ) ಜನಾಂಗದವರೊಬ್ಬರಿಗೆ ಸಂಪುಟ ದರ್ಜೆಯಲ್ಲಿ ಸಚಿವರನ್ನಾಗಿ ನೇಮಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಟಿಯಲ್ಲಿ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಮಾತನಾಡಿ, ಕರ್ನಾಟಕ ರಾಜ್ಯ ಲೋಕಸೇವಾ ಆಯೋಗ ರಚನೆಗೊಂಡು ಇಂದಿಗೆ ಸುಮಾರು 67 ವರ್ಷಗಳೇ ಕಳೆದರೂ ದಲಿತ ಸಮುದಾಯದ ಬಹು ದೊಡ್ಡದಾದ ಜನಾಂಗವಾದ ಛಲವಾ(ಬಲಗೈ) ಸಮುದಾಯಕ್ಕೆ ಇಲ್ಲಿಯವರೆಗೂ ಯಾರನ್ನೂ ನೇಮಿಸಿಲ್ಲ. ಇದು ನಮಗೆ ದುರಂತವೇ ಆಗಿದೆ. ಆದ್ದರಿಂದ ನಮಗೆ ಸಂಪುಟ ದರ್ಜೆಯಲ್ಲಿ ಸಚಿವ ಸ್ಥಾನ ನೀಡಲೇಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ