ಆ್ಯಂಬಿಡೆಂಟ್ ಪ್ರಕರಣ, ಹಲವು ಮಹತ್ವದ ಮಾಹಿತಿಗಳು ಲಭ್ಯ

ಬೆಂಗಳೂರು, ನ.24-ಆ್ಯಂಬಿಡೆಂಟ್ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿ ಅಧಿಕಾರಿಗಳಿಗೆ ಹಲವು ಮಹತ್ವದ ಮಾಹಿತಿಗಳು ಲಭ್ಯವಾಗಿದ್ದು, ಡೀಲ್ ರೂವಾರಿ ಫರೀದ್ ಹಲವು ವಿಷಯಗಳನ್ನು ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಫರೀದ್ ಸಂಬಂಧಿಯೊಬ್ಬರ ಕೈವಾಡ ಈ ಪ್ರಕರಣದಲ್ಲಿದ್ದು, ಬ್ರಿಜೇಶ್‍ರೆಡ್ಡಿಗೆ 2 ಕೋಟಿ ರೂ. ಹಣವನ್ನು ಫರೀದ್ ಅಳಿಯ ಶಾರೂಖ್ ಮಿರ್ಜಾ ತಲುಪಿಸಿರುವ ಬಗ್ಗೆ ಪೆÇಲೀಸರಿಗೆ ಮಾಹಿತಿ ಲಭ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಶಾರೂಖ್‍ಗಾಗಿ ಸಿಸಿ ಪೆÇಲೀಸರು ಬಲೆ ಬೀಸಿದ್ದಾರೆ.ಫೆಬ್ರವರಿ 27 ರಂದು ಶಾರೂಖ್ ಮಿರ್ಜಾ ಬೆಂಗಳೂರಿನ ಖಾಸಗಿ ಹೊಟೇಲ್‍ವೊಂದರ ಹಿಂಭಾಗ ಬ್ರಿಜೇಶ್‍ರೆಡ್ಡಿಗೆ 2 ಕೋಟಿ ರೂ. ತಲುಪಿಸಿದ್ದಾಗಿ ಫರೀದ್ ಹೇಳಿದ್ದಾರೆ ಎನ್ನಲಾಗಿದೆ.

ರಾಜಕಾರಣಿಗಳು ಹಾಗೂ ಪೆÇಲೀಸರಿಗೆ ಹಣ ನೀಡಿರುವುದಾಗಿ ಫರೀದ್ ಹೇಳಿಕೆ ನೀಡಿದ್ದು, ಈ ಬಗ್ಗೆಯೂ ಸಿಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ