ಉಪೇಂದ್ರ ಮುಂದಿನ ಚಿತ್ರಕ್ಕೆ ಶಶಾಂಕ್ ನಿರ್ದೇಶನ

ಬೆಂಗಳೂರು: ನಿರ್ದೇಶಕ ಶಶಾಂಕ್ ಹಾಗೂ ಉಪೇಂದ್ರ ಒಂದೇ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ ಎನ್ನುವ ಮಾತು 2016ರಲ್ಲಿ ಕೇಳಿ ಬಂದಿತ್ತು.
 ‘ತಾಯಿಗೆ ತಕ್ಕ ಮಗ’ ಸಿನಿಮಾದ ಕೆಲಸಗಳಲ್ಲಿ ಶಶಾಂಕ್ ನಿರತರಾದರು. ಹಾಗಾಗಿ ಆ ಸುದ್ದಿ ಅಲ್ಲಿಯೇ ತಣ್ಣಗಾಯಿತು. ಈಗ ಆ ವಿಚಾರ ನಿಜವಾಗಿದೆ. ಉಪೇಂದ್ರ ಅವರ ಮುಂದಿನ ಚಿತ್ರವನ್ನು ಶಶಾಂಕ್ ನಿರ್ದೇಶನ ಮಾಡುತ್ತಿದ್ದಾರೆ.

ಶಶಾಂಕ್ ನಿರ್ದೇಶನದ 9ನೇ ಹಾಗೂ ತಮ್ಮ ಹೋಮ್ ಪ್ರೊಡಕ್ಷನ್ ನ 2ನೇ ಚಿತ್ರದಲ್ಲಿ ಉಪೇಂದ್ರ ನಟಿಸಲಿದ್ದಾರೆ.

‘ಈಗಾಗಲೇ ಚಿತ್ರದ ಕಥೆ ಸಿದ್ಧಗೊಂಡಿದೆ. ಡಿಸೆಂಬರ್​ನಲ್ಲಿ ಪ್ರೀ-ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿವೆ. ಮಾರ್ಚ್​ನಲ್ಲಿ ಸಿನಿಮಾ ಸೆಟ್ಟೇರಲಿದೆ. ಚಿತ್ರದ ಕಥೆ ತುಂಬಾ ಭಿನ್ನವಾಗಿದೆ. ಉಪೇಂದ್ರ ಜತೆ ಸಿನಿಮಾ ಮಾಡುವಾಗ ಕಥೆ ದೊಡ್ಡ  ಸವಾಲು. ಉಪೇಂದ್ರ ಒಬ್ಬ ಕ್ರಿಯೇಟಿವ್ ವ್ಯಕ್ತಿ, ಉಪೇಂದ್ರ ಅವರಿಗಾಗಿ ನಾನು ಸೂಪರ್ ಕಥೆ ಬರೆದಿದ್ದಾರೆ. ಇದೊಂದು ಸಾಮಾಜಿಕ ನಾಟಕ, ಸಮಾಜದ ಇಂದಿನ ಸನ್ನಿವೇಶಗಳನ್ನು ಮನಸ್ಸಿನಲ್ಲಿರಿಸಿಕೊಂಡು ಹೆಣೆದಿರುವ ಕಥೆ ಇದಾಗಿದೆ.
ಸದ್ಯ ಉಪೇಂದ್ರ ರಾಜಕೀಯದಲ್ಲೂ ತೊಡಗಿಕೊಂಡಿದ್ದಾರೆ. ಹಾಗಾದರೆ ಈ ಸಿನಿಮಾದ ಕಥೆ ರಾಜಕೀಯ ಹಿನ್ನೆಲೆ ಹೊಂದಿರುತ್ತದೆಯೇ? ಈ ಪ್ರಶ್ನೆಗೆ ಉತ್ತರಿಸಿರುವ ಶಶಾಂಕ್, ‘ನಾನು ಕಥೆ ಸಿದ್ಧಪಡಿಸಿಕೊಳ್ಳುವಾಗ ಅವರಿನ್ನೂ ರಾಜಕೀಯಕ್ಕೆ ಕಾಲಿಟ್ಟಿರಲಿಲ್ಲ. ಹಾಗಾಗಿ ಸಿನಿಮಾ ಯಾವುದೇ ರಾಜಕೀಯ ಹಿನ್ನೆಲೆ ಹೊಂದಿರುವುದಿಲ್ಲ. ಸೋಷಿಯಲ್ ಡ್ರಾಮಾ ಶೈಲಿಯಲ್ಲಿ ಚಿತ್ರ ಮೂಡಿ ಬರುತ್ತಿದೆ’ ಎಂದು ಚಿತ್ರ ಹೇಗಿರಲಿದೆ ಎಂಬುದರ ಬಗ್ಗೆ ಸುಳಿವು ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ