ಎನ್‍ಎಸ್‍ಯುಐ ರಾಷ್ಟ್ರಾಧ್ಯಕ್ಷ ಸ್ಥಾನದ ರೇಸ್‍ನಲ್ಲಿ ಮಂಜುನಾಥ್‍ಗೌಡ

ಬೆಂಗಳೂರು, ನ.3- ಎರಡು ಬಾರಿ ಎನ್‍ಎಸ್‍ಎಐ ರಾಜ್ಯಾಧ್ಯಕ್ಷರಾಗಿರುವ ಮಂಜುನಾಥ್‍ಗೌಡ ಎನ್‍ಎಸ್‍ಯುಐ ರಾಷ್ಟ್ರಾಧ್ಯಕ್ಷ ಸ್ಥಾನದ ರೇಸ್‍ನಲ್ಲಿದ್ದಾರೆ.
ವಿವಿಧ ರಾಜ್ಯಗಳ ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷರನ್ನು ಎನ್‍ಎಸ್‍ಯುಐ ರಾಷ್ಟ್ರಾಧ್ಯಕ್ಷ ಸ್ಥಾನದ ಆಯ್ಕೆಗೆ ಸಮಿತಿ ಸಂದರ್ಶನ ನಡೆಸುತ್ತಿದ್ದು, ಕರ್ನಾಟಕ ರಾಜ್ಯದ ಮಂಜುನಾಥ್‍ಗೌಡ, ಮಹಾರಾಷ್ಟ್ರದ ಶಿವರಾಜ್ ಮೋರೆ ಹಾಗೂ ಮಧ್ಯ ಪ್ರದೇಶ್ ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷ ಮನೀಷ್ ಅಂತಿಮ ಸುತ್ತಿನಲ್ಲಿ ಇದ್ದಾರೆ.
ರಾಜ್ಯದಲ್ಲಿ ಪಕ್ಷ ಸಂಘಟನೆ, ನಾಯಕತ್ವದ ಗುಣ ಲಕ್ಷಣಗಳು ಇವುಗಳನ್ನು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಪರಾಮರ್ಶಿಸಿದ ನಂತರ ಎನ್‍ಎಸ್‍ಯುಐ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ತಿಳಿದುಬಂದಿದೆ.

ರಾಜ್ಯದ ಮಂಜುನಾಥ್‍ಗೌಡ ಅವರು ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷರಾಗಿ, ಉತ್ತಮ ಸಂಘಟಕರಾಗಿ ಕೆಲಸ ನಿರ್ವಹಿಸಿದ್ದರು. 30 ರಾಜ್ಯಗಳ ಎನ್‍ಎಸ್‍ಯುಐ ಅಧ್ಯಕ್ಷರ ಸಂದರ್ಶನ ನಡೆಸಿರುವ ಸಮಿತಿ ಅಂತಿಮವಾಗಿ ಮೂರು ರಾಜ್ಯಗಳ ಅಧ್ಯಕ್ಷರನ್ನು ಶಿಫಾರಸು ಮಾಡಿರುವ ಪೈಕಿ ಮಂಜುನಾಥ್‍ಗೌಡ ಅವರ ಹೆಸರು ಕೂಡ ಇದೆ.
ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಯಾರನ್ನು ಆಯ್ಕೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ