ಉಪಚುನಾವಣೆ: ಶಾಂತಿಯುತ ಮತದಾನ

ಬೆಂಗಳೂರು ,ನ.3- ರಾಜ್ಯದಲ್ಲಿ ನಡೆದಿರುವ ಐದು ಉಪಚುನಾವಣೆಗಳ ಮತದಾನ ಶಾಂತಿಯುತವಾಗಿದ್ದು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಯಾವುದೇ ಅಹಿತರ ಘಟನೆಗಳು ನಡೆದಿಲ್ಲ ಎಂದು ರಾಜ್ಯ ಜಂಟಿ ಮುಖ್ಯ ಚುನಾವಣಾಧಿಕಾರಿ ಸೂರ್ಯ ಸೇನ ತಿಳಿಸಿದ್ದಾರೆ.
ಬೆಳಗ್ಗೆ 7ರಿಂದ ಮತದಾನ ಆರಂಭವಾಗಿ ಮಂಡ್ಯದಲ್ಲಿ ಮಂದಗತಿಯ ಮತದಾನ ನಡೆದಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ಮಂಡ್ಯ-ಶೇ.26ರಷ್ಟು,ಜಮಖಂಡಿ- ಶೇ.43.5ರಷ್ಟು, ರಾಮನಗರ-ಶೇ.39ರಷ್ಟು , ಬಳ್ಳಾರಿ-ಶೇ.35ರಷ್ಟು, ಶಿವಮೊಗ್ಗ-ಶೇ.25ರಷ್ಟು ಮತದಾನ ನಡೆದಿದೆ ಎಂದರು.
ಇದೇ ಮೊದಲ ಬಾರಿಗೆ ವಿಕಲಚೇತನರಿಗೆ ಮತದಾನಕ್ಕೆ ಪಿಕಪ್ ಮತ್ತು ಡ್ರಾಪ್ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ