ಕಂಡಲ್ಲಿ ಕಸ ಹಾಕಿದರೆ 500 ರೂ. ದಂಡ

ಬೆಂಗಳೂರು: ನಗರದಲ್ಲಿರುವ ಕಸದ ಸಮಸ್ಯೆಯನ್ನು ಗಂಭೀರವಾಗಿ ಸ್ವೀಕರಿಸಿದ್ದು, ಕಂಡಕಂಡಲ್ಲಿ ಕಸ ಎಸೆದರೆ ಅಂಥವರಿಗೆ ವಿಧಿಸುತ್ತಿದ್ದ100 ರುಪಾಯಿ ದಂಡವನ್ನು 500 ರುಪಾಯಿಗೆ ಹೆಚ್ಚಿಸಿ, ಕಠಿಣವಾಗಿ ಈ ನಿಯಮವನ್ನು ಪಾಲಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಡಾ.ಜಿ.‌ ಪರಮೇಶ್ವರ್ ಹೇಳಿದರು.

ಮಲ್ಲೇಶ್ವರ ಬಿಬಿಎಂಪಿ ಕಚೇರಿಯಲ್ಲಿ ಕಸ ವಿಲೇವಾರಿ ಸಂಬಂಧ ಕರೆದಿದ್ದ ಅಧಿಕಾರಿ್ಳಗಳ ಸಭೆ ಬಳಿಕ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆಲವರು ಅನಧಿಕೃತವಾಗಿ ಕಂಡ ಕಂಡಲ್ಲಿ‌ ಕಸ‌ ಎಸೆಯುತ್ತಿರುವುದರಿಂದ ಕಸದ ಬ್ಲಾಕ್ ಸ್ಪಾಟ್‌ಗಳು ತಲೆ ಎತ್ತುತ್ತಿವೆ. ಹೀಗಾಗಿ ಅಂಥವರಿಗೆ ಕಠಿಣವಾಗಿ ದಂಡ ಹಾಕಲು‌ ಈಗಿರುವ ಮೊತ್ತವನ್ನು 500 ಕ್ಕೆ ಹೆಚ್ಚಿಸುವಂತೆ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿದ್ದು, ಶೀಘ್ರವೇ ಒಪ್ಪಿಗೆ ನೀಡಲಾಗುವುದು. ಈ‌ಬ್ಲಾಕ್‌ ಸ್ಪಾಟ್‌ಗಳಲ್ಲಿ‌ಕಸ ಹಾಕುವವರ‌ ಮೇಲೆ ನಿಗಾ ವಹಿಸಿ, ದಂಡ ಹಾಕಲು ಪ್ರತಿ ವಾರ್ಡ್‌ಗಳಿಗೆ ನಿವೃತ್ತ ಯೋಧರೊಬ್ಬರನ್ನು ನೇಮಿಸಲು ಕೂಡ ನಿರ್ಧರಿಸಿದ್ದೇವೆ ಎಂದರು.

ನಗರದಲ್ಲಿ ಕಸನದ ಸಮಸ್ಯೆ ತೀವ್ರವಾಗುತ್ತಿದ್ದು, ನ್ಯಾಯಾಲಯ ಈ ಬಗ್ಗೆ ನಿರ್ದೇಶನ ನೀಡಿದ್ದು, ಇದನ್ನು ಸ್ವಾಗತಿಸುವೆ. ಪ್ರಸ್ತುತ ಕಸದ ನಿರ್ವಹಣೆಯನ್ನು‌ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ. ನಗರದಲ್ಲಿ 13 ಮಿಲಿಯಂ ಜನಸಂಖ್ಯೆ ಇದ್ದು, 29 ಲಕ್ಷ ಮನೆಗಳಿವೆ. ಇದರಲ್ಲಿ 5 ಲಕ್ಷ ಕಮರ್ಷಿಯಲ್ ಇದೆ. ರೆಸಿಡೆನ್ಸಿ‌ಯಿಂದ ಒಟ್ಟು 4,200 ಹಾಗೂ ಹೋಟೆಲ್‌ ಕಲ್ಯಾಣ ಮಂಟಪ ಇತರೆ 1500 ಸೇರಿ ಒಟ್ಟು 5,700 ಟನ್ ಕಸ ಉತ್ಪಾದನೆಯಾಗುತ್ತಿದೆ.

* ಇದರ ನಿರ್ವಹಣೆಗೆ 4,213 ಆಟೊ ಟಿಪ್ಪರ್ಸ್‌ಗಳು ಮನೆಮನೆಗೆ ತೆರಳಿ ಕಸ ಸಂಗ್ರಹಿಸಲಿದೆ. 566 ಕಾಂಪ್ಯಾಕ್ಟರ್ಸ್ ವಾಹನ, 8 ಮೆಕ್ಯಾನಿಕಲ್ ಸ್ವೀಪರ್ಸ್ ವಾಹನಗಳಿದ್ದು,18,500 ಪೌರ ಕಾರ್ಮಿಕರಿದ್ದಾರೆ.

* 166 ನಿರ್ವಹಣಾ ಘಟಕ, ಡ್ರೈವೇಜ್ ಕಲೆಕ್ಷನ್ ಸೆಂಟರ್, 11 ಕಡೆ ಬಯೋ ಮಿಥನೇಷನ್ ಪ್ಲಾಂಟ್‌ ಇದ್ದು ೬ ಪ್ಲಾಂಟ್‌ಗಳು ಕಾರ್ಯ‌ನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.

* ಕಸ ನಿರ್ವಹಣೆಗೆ ಈಗಿರುವ ಕಾಂಪ್ಯಾಕ್ಟರ್‌ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಆಟೋ ಟಿಪ್ಪರ್‌ಗಳಿಗೂ ಜಿಪಿಎಸ್‌ ಅಳವಡಿಸುವ ಚಿಂತನೆ ಇದೆ.

* ವಾಹನ ಖರೀದಿಗೆ ಹೊಸದಾಗಿ ಟೆಂಡರ್ ಕರೆಯುವ ಸಂದರ್ಭದಲ್ಲಿ ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್‌ಗಳನ್ನು ಗುತ್ತುಗೆದಾರರೇ ನಿರ್ವಹಿಸುವ ಅಂಶವನ್ನು ಅಳವಡಿಸಲಾಗುವುದು ಎಂದರು.

* ಪ್ರಸ್ತುತ ಎಂಟು ಮೆಕ್ಯಾನಿಕಲ್ ಸ್ವೀಪರ್ಸ್‌ ಮಷಿನ್‌ಗಳಿದ್ದು, ಹೊಸದಾಗಿ ಈ ವಾಹನ ಖರೀದಿಗೆ ಟೆಂಡರ್ ಕರೆಯಲಾಗುವುದು.

* ಈಗಿರುವ ಬೆಲ್ಲಳ್ಳಿ ಕ್ವಾರಿ ಮೂರು ತಿಂಗಳಲ್ಲಿ ಪೂರ್ಣಗೊಂಡು ಮುಚ್ಚಲಾಗುತ್ತದೆ. ಇದಕ್ಕೆ ಪರ್ಯಾಯವಾಗಿ ದೊಡ್ಡಬಳ್ಳಾಪುರದಲ್ಲಿರುವ ಟೆರಾಫಾರ್ಮಾನನ್ನು ಆಧುನೀಕರಿಸಿ ಪ್ರಾರಂಭಿಸಲಾಗುವುದು. ಇದರ ಜೊತೆಗೆ ಉಲ್ಲಳ್ಳಿ, ಮಾರೇನಹಳ್ಳಿ, ಬಾಗಲೂರು ಕ್ವಾರಿಯ ಪರ್ಯಾಯ ವ್ಯವಸ್ಥೆ ಮಾಡಲು ಚರ್ಚಿಸಲಾಗಿದೆ ಎಂದರು.

* ಕಸದಿಂದ ವಿದ್ಯುತ್ ಉತ್ಪಾದನೆಯ ಯೋಜನೆಯನ್ನು ಬಿಬಿಎಂಪಿಯಿಂದ‌ ಆರು ತಿಂಗಳೊಳಗೆ ಪ್ರಾರಂಭಿಸಲು ಸೂಚಿಸಿದ್ದೆನೆ. ಬಿಡದಿ ಬಳಿ ಬೆಸ್ಕಾಂ ವತಿಯಿಙದ ತೆರೆಯುತ್ತಿರುವ ವಿದ್ಯುತ್ ಉತ್ಪಾದನಾ ಕೇಂದ್ರ ಕೆಲವೇ ದಿನಗಳಲ್ಲಿ ತೆರೆಯಲಿದೆ.

* ಪ್ರತಿ ಬಿಬಿಎಂಪಿ ವಲಯದಲ್ಲಿ ಕಸ ನಿರ್ವಹಣೆಗೆಂದೇ ಸಹಾಯಕ ಇಂಜಿನಿಯರ್‌ಗಳನ್ನು ನೇಮಕ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ
ಹಿರಿಯ ಆರೋಗ್ಯಾಧಿಕಾರಿಗಳನ್ನು ನೇಮಿಸಿ‌ ಇದರ ಜವಾಬ್ದಾರಿ ನೀಡಲಾಗಿದೆ. ಗುತ್ತಿಗೆ ಮೇಲೆ ನೇಮಿಸಿರುವ ಈಗಿರುವ ಆರೋಗ್ಯಾಧಿಕಾರಿಗಳು ಹಾಗೂ ದಫೇದಾರ್‌ಗಳನ್ನು ಮುಂದುವರೆಸಲಾಗುತ್ತದೆ.

BBMP,DCM G Parameshwar,Meeting,Wasteg problem

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ