ಉಪಚುನಾವಣೆಗೆ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಬೆಂಗಳೂರು, ಅ.24-ಮುಂದಿನ ತಿಂಗಳು ನಡೆಯುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆಗೆ ಬಿಜೆಪಿ ಪ್ರಚಾರಕರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.

ಬಿ.ಎಸ್.ಯಡಿಯೂರಪ್ಪ, ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ಪಿ.ಮುರಳೀಧರ ರಾವ್, ಪುರಂದರೇಶ್ವರಿ, ಬಿ.ಎಲ್. ಸಂತೋಷ್, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್. ಅಶೋಕ್, ಪ್ರಹ್ಲಾದ್ ಜೋಶಿ, ಎಂ.ಗೋವಿಂದ ಕಾರಜೋಳ, ಅರುಣ್‍ಕುಮಾರ್, ಶೋಭಾ ಕರಂದ್ಲಾಜೆ, ಎನ್.ರವಿಕುಮಾರ್, ಶ್ರೀರಾಮುಲು, ಜಿ.ಎಂ.ಸಿದ್ದೇಶ್ವರ, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಭಾರತೀ ಶೆಟ್ಟಿ, ತೇಜಸ್ವಿನಿ ಗೌಡ, ಪ್ರತಾಪ್ ಸಿಂಹ, ಡಿ.ಎಸ್.ವೀರಯ್ಯ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೋಟಾ ಶ್ರೀನಿವಾಸ ಪೂಜಾರಿ, ಪಿ.ಸಿ.ಗದ್ದಿಗೌಡರ್, ಅಶ್ವತ್ಥ್ ನಾರಾಯಣ, ತಾರಾ ಅನುರಾಧಾ, ಆಯನೂರು ಮಂಜುನಾಥ್, ಮುರುಗೇಶ್ ನಿರಾಣಿ, ಸಿ.ಪಿ.ಯೋಗೇಶ್ವರ್, ಲಕ್ಷ್ಮಣ್ ಸವದಿ, ರಾಜುಗೌಡ, ನಾರಾಯಣ ಸ್ವಾಮಿ ಆನೇಕಲ್, ಸುನೀಲ್ ಕುಮಾರ್ ಕಾರ್ಕಳ, ಶ್ರುತಿ, ಚಲವಾದಿ ನಾರಾಯಣಸ್ವಾಮಿ. ಇವರುಗಳು ಉಪಚುನಾವಣೆಯ ಬಿಜೆಪಿ ಪ್ರಚಾರಕರಾಗಿದ್ದಾರೆ. ಇಂದೇ ಪಟ್ಟಿ ಅಂತಿಮಗೊಳಿಸಿ, ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಬಿಜೆಪಿ ತಲುಪಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ