ಉಪಸಮರ; ಏರುತ್ತಲೇ ಇದೆ ಮೂರು ಪಕ್ಷಗಳ ಪರ ಸ್ಟಾರ್ ಪ್ರಚಾರಕರ ಪಟ್ಟಿ

ಬೆಂಗಳೂರು, ಅ.21- ಲೋಕಸಭೆಯ ಉಪಸಮರ ದಿನಾಂಕ ಸಮೀಪಿಸುತ್ತಿದ್ದಂತೆ ಮೂರು ಪಕ್ಷಗಳ ಪರ ಸ್ಟಾರ್ ಪ್ರಚಾರಕರ ಪಟ್ಟಿ ಏರುತ್ತಲೇ ಹೋಗುತ್ತಿದೆ. ಬಳ್ಳಾರಿ, ಶಿವಮೊಗ್ಗ , ಮಂಡ್ಯ ಕ್ಷೇತ್ರಗಳಲ್ಲಿ ಮತದಾರರ ಗಮನ ಸೆಳೆಯಲು ಸಿನಿತಾರೆಯರನ್ನೂ ಕೂಡ ಪ್ರಚಾರಕ್ಕೆ ಕರೆತರಲು ಚಿಂತಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷವು ತಮ್ಮ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮಿತ್ರ ಪಕ್ಷವಾದ ಜೆಡಿಎಸ್ ಕೂಡ ತಮ್ಮ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಳ್ಳಾರಿ ಕ್ಷೇತ್ರದಲ್ಲಿ ತೆಲುಗಿನ ಹವಾ ಕೂಡ ಜೋರಾಗಿರುವುದರಿಂದ ಅಲ್ಲಿ ಮತದಾರರ ಗಮನ ಸೆಳೆಯಲು ಜೆಡಿಎಸ್ ಪಕ್ಷವು ತೆಲುಗಿನ ಸ್ಟಾರ್ ನಟ ಪವನ್‍ಕಲ್ಯಾಣ್ ಅವರನ್ನು ತಮ್ಮ ಪ್ರಚಾರರ ಪಟ್ಟಿಯಲ್ಲಿ ಹೆಸರಿಸಿದ್ದಾರೆ.

ಜೆಡಿಎಸ್ ಪಕ್ಷದ ಪರ ಉಪ ಚುನಾವಣೆಗಳಲ್ಲಿ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್, ನಟಿಯರಾದ ಪೂಜಾಗಾಂಧಿ, ಅಮೂಲ್ಯ, ಶಾಸಕ ಚೌಡರೆಡ್ಡಿ ತೂಪಳ್ಳಿ, ಬಸವರಾಜ್ ಪದ್ಯಾರ್ಥಿ, ಆರ್.ಪ್ರಕಾಶ್, ಸೂರಜ್ ರೇವಣ್ಣ ಅವರ ಹೆಸರು ಸೇರ್ಪಡೆಯಾಗಿವೆ ಎಂದು ಶಾಸಕ, ಜೆಡಿಎಸ್ ವಕ್ತಾರ ರಮೇಶ್‍ಬಾಬು ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ