ದಕ್ಷಿಣ ಭಾರತಕ್ಕೆ ಇಸ್ರೇಲ್ ದೇಶದ ಉಪರಾಯಭಾರಿಯಾಗಿರುವ ದಾನಕರ್ಷ್ ಮೇಯರ್‍ಗೆ ಪತ್ರ

ಬೆಂಗಳೂರು, ಅ.12-ಇಸ್ರೇಲ್ ದೇಶದ ಉಪರಾಯಭಾರಿ ದಾನಕರ್ಷ್‍ಅವರ ಮೇಯರ್ ಗಂಗಾಂಬಿಕೆಯವರನ್ನು ಭೇಟಿ ಮಾಡಿ ಬೆಂಗಳೂರು ಅಭಿವೃದ್ಧಿ ಬಗ್ಗೆ ಚರ್ಚಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತಕ್ಕೆ ಇಸ್ರೇಲ್ ದೇಶದ ಉಪರಾಯಭಾರಿಯಾಗಿರುವ ದಾನಕರ್ಷ್ ಅವರು ಈ ಕುರಿತಂತೆ ಮೇಯರ್ ಅವರಿಗೆ ಪತ್ರ ಬರೆದಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದೀರ, ಇದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಅವಧಿಯಲ್ಲಿ ಬೆಂಗಳೂರು ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಲಿ ಎಂದು ಆಶಿಸುತ್ತೇನೆ. ಇಸ್ರೇಲ್ ದೇಶದಿಂದ ಅಭಿವೃದ್ಧಿಗೆ ಬೇಕಾದ ಎಲ್ಲಾ ಸಹಕಾರ, ನೆರವು ಕೊಡಲು ನಾವು ಸಿದ್ಧ ಎಂದು ಹೇಳಿದ್ದಾರೆ.
ನಾನು ನಿಮ್ಮನ್ನು ಭೇಟಿ ಮಾಡಲು ಇಚ್ಛಿಸಿದ್ದೇನೆ. ಅದಕ್ಕಾಗಿ ಸೂಕ್ತ ದಿನಾಂಕ ನಿಗದಿ ಮಾಡಿ ನೀವು ತಿಳಿಸಿದರೆ ನಾನು ನಿಮ್ಮನ್ನು ಭೇಟಿಯಾಗಿ ಖುದ್ದು ಮಾತುಕತೆ ನಡೆಸುತ್ತೇನೆ ಎಂದು ಉಪರಾಯಭಾರಿ ಪತ್ರದಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ