ಎರಡು ಬೈಕ್‍ಗಳಿಗೆ ಮಿನಿ ಲಾರಿ ಡಿಕ್ಕಿ: ಬಿಬಿಎ ವಿದ್ಯಾರ್ಥಿ ಸಾವು

ಬೆಂಗಳೂರು, ಅ.11-ಅತಿ ವೇಗವಾಗಿ ಮುನ್ನುಗ್ಗಿದ ಮಿನಿ ಲಾರಿಯೊಂದು ಎರಡು ಬೈಕ್‍ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬಿಬಿಎ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಹುಳಿಮಾವು ಸಂಚಾರಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಮಂಗಮ್ಮನಪಾಳ್ಯದ ನಿವಾಸಿ ಗುರುಕಿರಣ್(19) ಅಪಘಾತದಲ್ಲಿ ಮೃತಪಟ್ಟ ಬಿಬಿಎ ವಿದ್ಯಾರ್ಥಿ.

ಇಂದು ಬೆಳಗ್ಗೆ 7.50ರಲ್ಲಿ ಗುರುಕಿರಣ್ ಎಂದಿನಂತೆ ಬೈಕ್‍ನಲ್ಲಿ ಕಾಲೇಜಿಗೆ ಹೋಗುತ್ತಿದ್ದನು. ಹೊಸೂರು ರಸ್ತೆಯ ದಯಾನಂದ ಕಾಲೇಜು ಬಳಿ ಬರುತ್ತಿದ್ದಂತೆ ಅತಿ ವೇಗವಾಗಿ ಮುನ್ನುಗ್ಗಿದ ಮಿನಿ ಲಾರಿ ಗುರುಕಿರಣ್ ಬೈಕ್ ಹಾಗೂ ಮತ್ತೊಂದು ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಗುರುಕಿರಣ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮತ್ತೊಂದು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ಈತನನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಸುದ್ದಿ ತಿಳಿದ ಹುಳಿಮಾವು ಸಂಚಾರಿ ಠಾಣೆ ಪೆÇಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ