ತೂಬಗೆರೆ ಸರ್ಕಾರಿ ಪ್ರೌಢ ಶಾಲಾ 1997 98ನೇಸಾಲಿನ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ

ದೊಡ್ಡಬಳ್ಳಾಪುರ: ಜಗತ್ತಿನಲ್ಲಿ ಶಿಕ್ಷಣಕ್ಕಿಂತ ಆದ್ಯಾತ್ಮ ಮತ್ತ್ತೊಂದಿಲ್ಲ, ಮಕ್ಕಳನ್ನು ಶಿಕ್ಷಕರಾದವರು ನಗುಮುಖದಿಂದ ನೋಡಬೇಕಿದೆ, ಯಾವುದೇ ಜಾತಿ, ಧರ್ಮ, ಮತ ಇಲ್ಲದೇ ಎಲ್ಲರನ್ನು ಒಟ್ಟಾಗಿ ನೋಡುವ ಮಮತೆ, ಸಮಾನತೆ ಇಂದು ಪ್ರತಿಯೊಬ್ಬರ ಜೀವನದಲ್ಲಿ ಮೌಲ್ಯಗಳಾಗಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪುಟ್ಟರಾಜು ಹೇಳಿದರು.
ತೂಬಗೆರೆಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ 1997-98 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾದ ಹಳೆ ವಿದ್ಯಾರ್ಥಿಗಳು ಗುರುವಂದಾನ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹಂಬಿಕೊಂಡಿದ್ದರು.
ಸ್ವಂತ ಬುದ್ದಿಯಿಂದ ಜಗತ್ತು ನೋಡುವ ಕೆಲಸ ಆಗಬೇಕಿದೆ, ಶಿಷ್ಯ ವೃಂದ ಜೀವನದ ಉದ್ದಕ್ಕೂ ಶಿಕ್ಷಕರನ್ನು ನೆನೆಪಿನಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಶಿಕ್ಷಕರು ಮಕ್ಕಳಲ್ಲಿ ಬದುಕು ರೂಪಿಸಬೇಕಿದೆ ಕೇವಲ ಪಠ್ಯ ಭೋಧನೆಗೆ ಸಿಮೀತಗೊಳ್ಳದೇ ವಿದ್ಯಾರ್ಥಿಗಳಲ್ಲಿ ಸೃಜನಶಿಲತೆ ಬೆಳೆಸುವಂತಹ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಚಟಿವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅಭಿರುಚಿ ಮೂಡಿಸುವ ಕೆಲಸವನ್ನು ಶಿಕ್ಷಕರು ಪ್ರಾಮಾಣಿಕತೆಯಿಂದ ಮಾಡಬೇಕು, ಜೀವನದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಸರಳವಾಗಿ ಬದುಕುನಡೆಸುವುದರಿಂದ ಸಿಗುವ ಆತ್ಮ ತೃಪ್ತಿ ಸಂತೋಷ ಆನಂದ ಯಾವುದರಲ್ಲಿಯು ಸಿಗುವುದಿಲ್ಲ, ಭಾರತದ ಜನ ಸರಳವಾಗಿ ಬದುಕುತ್ತಾರೆಂದ ಕಾರಣಕ್ಕೆ ವಿದೇಶಿಗರು ನಮ್ಮ ದೇಶಿಯ ಜೀವನ ಶೈಲಿಯನ್ನು ಇಷ್ಟಪಡುತ್ತಾರೆ, ಸರಳ ಜೀವನ ಶೈಲಿಯಲ್ಲಿ ಸಿಗುವ ಅನುಪಮ ಶಕ್ತಿ ಮತ್ತೊಂದರಲ್ಲಿ ಸಿಗುವುದಿಲ್ಲ ವಿಪರ್ಯಾಸ ಇವತ್ತು ಯಾವುದೇ ಕಾಲದಲ್ಲಿಯು ಕೆಟ್ಟ ರಾಜಕಾರಣ ಜಾತಿ, ಧರ್ಮ, ಮತ ಬೇಧ ಸಮಾಜವನ್ನು ಹಾಳು ಮಾಡುತ್ತಿದೆ, ನಮ್ಮನ್ನು ನಾವು ಜೀವನದಲ್ಲಿ ತೊಳೆದುಕೊಳ್ಳದಿದ್ದರೆ ಬದುಕಿನಲ್ಲಿ ಉನ್ನತ್ತೀಕರಣ ಗೊಳ್ಳುವುದು ಅಸಾಧ್ಯ, ಉನ್ನತ್ತೀಕರಣಗೊಳ್ಳಬೇಕಾದರೆ ಮನುಷ್ಯನಲ್ಲಿ ನೈತಿಕ ಹಾಗೂ ಸಾಂಸ್ಕೃತಿಕ ಅಭಿರುಚಿ ಅಗತ್ಯ, ಶಿಕ್ಷಕರು ಸದಾ ಅಧ್ಯಯನಶೀಲರಾಗಬೇಕು, ಪುಸ್ತಕಗಳನ್ನು ನಿರಂತವಾಗಿ ಓದುವ ಅಭ್ಯಾಸ ಮಾಡಿಕೊಳ್ಳಬೇಕು, ವೈಚಾರಿಕವಾಗಿ ಜನರನ್ನು ಪ್ರೀತಿಸುವ ಕೆಲಸ ಸಮಾಜದಲ್ಲಿ ಅಗಬೇಕು, ಈ ನಿಟ್ಟಿನಲ್ಲಿ ಭವಿಷ್ಯದ ಪ್ರಜೆಗಳಾಗಿರುವ ಮಕ್ಕಳಲ್ಲಿ ಸಮಾನತೆ ಮತ್ತು ಮಮತೆ, ಬೆಳೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 1997-98 ನೇ ಸಾಲಿನಲ್ಲಿ ವಿದ್ಯಭ್ಯಾಸ ಮಾಡಿದ 70 ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು.
ತೂಬಗೆರೆ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಸುಂದರರಾಜು ಮಾತನಾಡಿ ಇದೆ ಸರ್ಕಾರಿ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದವರು ಪತ್ರಕರ್ತರಾಗಿ ಸರ್ಕಲ್ ಇನ್ಸ್ ಪೆಕ್ಟರ್, ಸೈನಿಕರಾಗಿ ಇನ್ನೂ ಹಲವು ಉನ್ನತ ಮಟ್ಟದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇಂದು ಸಾಮಾಜಿಕ ಜಾಲತಾಣಗಳು ಅಭಿವ್ಯಕ್ತಿ ಸ್ವತಂತ್ರ್ಯಕ್ಕೆ ಬಲ ತಂದುಕೊಟ್ಟಿದೆ, ಅದರಲ್ಲೂ ಮುಖ್ಯವಾಗಿ ಮಾತನಾಡಲೇ ಬಾರೆದೆಂಬ ಸ್ಥಿತಿಯಲ್ಲಿದ್ದ ಮಹಿಳೆಯರಿಗೂ ಜಾಲತಾಣಗಳು ದೊಡ್ಡ ದ್ವನಿಯಾಗಿವೆ, ನಾವು ಜಾಲತಾಣಗಳ ದಾಸರಾಗದೇ ಸ್ವಂತ ಬುದ್ದಿಶಕ್ತಿಯಿಂದ ಬಳಸಬೇಕು, ಫೇಸ್ ಬುಕ್ ವಾಟ್ಸ್ ಆಪ್ ಗಳಲ್ಲಿ ಬರುವ ಸಂದೇಶಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಮಾಜಕ್ಕೆ ಉಪಯುಕ್ತವಾಗಿದ್ದರೆ ಮಾತ್ರ ಇನ್ನೂಬ್ಬರಿಗೆ ಕಳುಹಿಸಿ, ಅನವಶ್ಯಕವಾದ ಸಂದೇಶಗಳನ್ನು ಕಳುಹಿಸಿ ಅವಾಂತರ ಸೃಷ್ಟಿಗೆ ಕಾರಣವಾಗಬೇಡಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕಜಾಲತಾಣಗಳ ಪ್ರಭಾವದಿಂದ ಮನುಷ್ಯನಿಗೆ ತನ್ನಲ್ಲಿ ತನಗೆ ಆಸಕ್ತಿ ಕಡಿಮೆಯಾಗುತ್ತಿದೆ, ಸಮಾಜದ ಮೇಲೆ ಆಸಕ್ತಿ ಕಡಿಮೆ ಆಗುತ್ತಿದೆ, ಎಲ್ಲೋ ಒಂದು ಕಡೆ ಯುವ ಪೀಳಿಗೆ ಜಾಲತಾಣಗಳ ಮನೋದಾಸ್ಯಕ್ಕೆ ಒಳಗಾಗುವ ಮೂಲಕ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು, ನಿವೃತ್ತ ಶಿಕ್ಷಕ ಹಾಗೂ ಲೇಖಕರು ಖಲೀಲುಲ್ಲಾಖಾನ್, ನಿವೃತ್ತ ಶಿಕ್ಷಕ ಎ.ಆರ್.ಸುಬ್ಬಾರಾವ್, ಅನಂತಪದ್ಮನಾಭ ಶರ್ಮ, ಶಶಿಕುಮಾರ್, ಶಿಕ್ಷಕ ಮುನಿಕೃಷ್ಣಪ್ಪ, ರೇಣುಕಾಭಟ್, ವಿಶ್ವನಾಥ್, ಡಿ.ಎಸ್.ಇ.ಆರ್.ಟಿ ಅಕಾಡೆಮಿಕ್ ಅಸಿಸ್ಟೆಂಟ್ ಎನ್.ಪಾರ್ವತಿ, ಶಾಲಾ ಸಿಬ್ಬಂದಿ ರಾಮಯ್ಯ, ಗಂಗಾಧರಪ್ಪ, ಲಕ್ಷಮ್ಮ, ಸೈನಿಕ ಅನಂತರಾಜ್ ಗೋಪಲ್, ಯಲಹಂಕ ಸಂಚಾರ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ರವಿಕುಮಾರ್, ಪತ್ರಕರ್ತ ಶಿವಕುಮಾರ್ ಛಾಯಗ್ರಾಹಕ ಜೆ.ಮಂಜುನಾಥ ಹಳೆಯ ವಿದ್ಯಾರ್ಥಿಗಳು ಜೈಪ್ರಕಾಶ್, ಮೂರ್ತಿ, ಕೆ.ಟಿಮುನಿರಾಜು, ರವಿಕುಮಾರ್, ಓಂಪ್ರಕಾಶ್, ಜಯಲಕ್ಷ್ಮಿ, ದಾಕ್ಷಯಿಣಿ, ನರಸಿಂಹರಾಜು, ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ