ನೀರ ಮೇಲಿನ ಗುಳ್ಳೆ ಈ ಸರ್ಕಾರ: ಶೆಟ್ಟರ

ಹುಬ್ಬಳ್ಳಿ- ರಾಜ್ಯದ ಈ ಸಮ್ಮಿಶ್ರ ಸರ್ಕಾರ ನೀರ ಮೇಲಿನ ಗುಳ್ಳಯಂತಿದೆ, ಅದು ಯಾವಾಗ ಬೇಕಾದ್ರು ಒಡೆಯಬಹುದು. ಈ ಸರ್ಕಾರ ಎನಿ ಟೈಮ್  ಪತನಗೊಳ್ಳುತ್ತೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ ಹೇಳಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಜನಾದೇಶದ ವಿರುದ್ದ ಇರೋ ಸರ್ಕಾರ. ಅಧಿಕಾರದ ಹಪಾಹಪಿಯಿಂದ ಸಮ್ಮೀಶ್ರ ಸರ್ಕಾರ ಬಂದಿದೆ. ಕಾಂಗ್ರೆಸ್ ಶಾಕರು ಹಾಗೂ ಸಚಿವರು ಗುದ್ದಾಟ ನಡೆಸಿದ್ದಾರೆ. ಅವರ ನಡುವೆ ಒಳಬೇಗುದಿ ಇದೆ. ಜೆಡಿಎಸ್ ಜೊತೆ ಮೈತ್ರಿ‌ ಮಾಡಿಕೊಂಡು ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದರು. ಸಿಎಂ ಕಿಂಗ್ ಪಿನ್ ಹೇಳಿಕೆ ವಿಚಾರ. ನಿಮ್ಮಲ್ಲಿ ಸಾಕ್ಷಿ ಇದ್ದರೆ ಕ್ರಮ ಕೈಗೊಳ್ಳಿ. ಅದು ಬಿಟ್ಟು ಹಿಟ್ ಅಂಡ್ ರನ್ ಹೇಳಿಕೆ ನೀಡಬೇಡಿ. ಬಿಜೆಪಿ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ನಿಮಗೆ ಗಟ್ಸ್ ಇದ್ದರೆ ನಿಮ್ಮ ಶಾಸಕರನ್ನ ಹತೋಟಿಯಲ್ಲಿಟ್ಟುಕೊಳ್ಳಿ ಎಂದ ಜಗದೀಶ್ ಶೆಟ್ಟರ್ ಸರ್ಕಾರ ಬಿದ್ದರೆ ಸಹಜವಾಗೇ ನಾವು ಉಪಯೋಗ ತೆಗದುಕೊಳ್ಳುತ್ತೆವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ