ಸರ್ಕಾರ ಅಸ್ತಿತ್ವದಲ್ಲಿದೆಯೇ: ಶೆಟ್ಟರ

ಹುಬ್ಬಳ್ಳಿ-: ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವಿನ ಹೆಚ್ಚಾಗಿದ್ದು, ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಲೇವಡಿ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರ 100ನೇ ದಿನಕ್ಕೆ ಕಾಲಿಟ್ಟ ಕುರಿತು ಮಾದ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವಿ ಕಚ್ಚಾಟ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ‌ಕುಮಾಸ್ವಾಮಿಯವರು ಯಾಕೇ ಸಿಎಂ ಆಗಿದ್ದಾರೆ ಎನ್ನುವದು ಅರ್ಥವಾಗುತ್ತಿಲ್ಲಾ ಎಂದರು. ಕುಮಾರಸ್ವಾಮಿ 100 ದಿನದ ಸಾಧನೆಯಲ್ಲಿ ಜಾಹಿರಾತು ಕೇವಲ ಜೆಡಿಎಸ್ ಹೆಸರಿನಲ್ಲಿ ಇದೆ. ಕಾಂಗ್ರೆಸ್ ಪಕ್ಷದ ಅಥವಾ ಸಮ್ಮಿಶ್ರ ಸರ್ಕಾರ ಅಂತಾ ಇಲ್ಲಾ. ಜಾಹೀರಾತು ಮೂಲಕ ಸುಳ್ಳು ಮಾಹಿತಿ ನೀಡಿದ್ದಾರೆ. 100 ದಿನದ ಸಾಧನೆ ಶೂನ್ಯ ಸಾಧನೆಯಾಗಿದೆ ಎಂದು ವಾಗ್ದಾಳಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ