ಪತ್ರೇಶ್ವರ ಮಠದಿಂದ ಕೊಡಗು ನೆರೆ ಸಂತ್ರಸ್ತರಿಗೆ ಸಹಾಯಹಸ್ತ

ಧಾರವಾಡ: ಕೊಡಗು ಜಲಪ್ರವಾಹ ಸಂತ್ರಸ್ತರಿಗೆ ಸಹಾಯಹಸ್ತ ನೀಡುವ ಹಿನ್ನೆಲೆಯಲ್ಲಿ ಧಾರವಾಡದ ಕಮಲಾಪೂರ ಪತ್ರೆಶ್ವರ ಸ್ವಾಮಿಮಠದ ಭಕ್ತಾಧಿಗಳು ಹಾಗೂ ಮಠದ ಯುವಕ ವೃಂದದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಧನಸಹಾಯ ಚೆಕ್ ವಿತರಿಸಿದರು.

ಚೆಕ್ ಸ್ವೀಕರಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ದೀಪಾ ಅವರು, ಯುವ ಉತ್ಸಾಹಿಗಳು ಜಲಪ್ರವಾಹ ಸಂತ್ರಸ್ತರಿಗೆ ನೆರವು ನೀಡುತ್ತಿರುವುದು ಶ್ಲಾಘನೀಯವಾಗಿದೇ ಅಲ್ಲದೇ ನೆರೆಹೊರೆಯವರ ಸಂಕಷ್ಟಗಳಿಗೆ ಸ್ಪಂದಿಸುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕಮಲಾಪೂರ ಪತ್ರೇಶ್ವರಮಠದ ಸಂಜೀವ, ರಾಜು, ಚೇತನ್ ಸೇರಿದಂತೆ ಇತರರು ಇದ್ದರು‌.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ