ಕೇಬಲ್ ಆಪರೇಟರ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ

ಬೆಂಗಳೂರು, ಆ.28-ಕೇಬಲ್ ಆಪರೇಟರ್ ಒಬ್ಬರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ಎಚ್‍ಎಎಲ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗಿನ ಜಾವ ನಡೆದಿದೆ.
ಎಚ್‍ಎಎಲ್‍ನ ಕಾರ್ತಿಕ್‍ನಗರದ ಸರ್ವೀಸ್ ರಸ್ತೆ ನಿವಾಸಿಯಾದ ಕೇಬಲ್ ಆಪರೇಟರ್ ಅನಂತಸ್ವಾಮಿ ಅವರು ಹಲ್ಲೆಗೊಳಗಾದವರು. ನಿನ್ನೆ ರಾತ್ರಿ ಕಾರ್ತಿಕ್‍ನಗರದಲ್ಲ್ಲಿ ಅವರಿಗೂ ವಿಘ್ನೇಶ್ ಎಂಬವರಿಗೂ ಜಗಳವಾಗಿದೆ. ಆಗ ಅನಂತಸ್ವಾಮಿ ಅವರ ಮುಖದ ಮೇಲೆ ವಿಘ್ನೇಶ್ ಕೈಯಿಂದ ಗುದ್ದಿದ್ದಾರೆ. ಹಲ್ಲೆಗೆ ಕಾರಣ ತಿಳಿದುಬಂದಿಲ್ಲ.
ಈ ಬಗ್ಗೆ ಅನಂತಸ್ವಾಮಿ ಅವರು ನೀಡಿರುವ ದೂರಿನ ಆಧಾರದಲ್ಲಿ ಎಚ್‍ಎಎಲ್ ಪೆÇಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ