ಅನಾಥ ಆಶ್ರಮದಲ್ಲಿ ರಕ್ಷಾ ಬಂಧನ ಆಚರಣೆ

  • ಅನಾಥ ಆಶ್ರಮದಲ್ಲಿ ರಕ್ಷಾ ಬಂಧನ ಆಚರಣೆ

ವಿಜಯಪುರ ನಗರದ ಬಸವನಗರ ಬಡಾವಣೆಯಲ್ಲಿ ಇರುವ ಅನಾಥ ಆಶ್ರಮದಲ್ಲಿ ಜೈ ಭೀಮ್ ಸೇನಾ ಮಹಿಳಾ ಸಂಘಟನೆಯ ಕಾರ್ಯಕರ್ತರು ಅನಾಥ ಮಕ್ಕಳಿಗೆ ರಾಖಿ ಕಟ್ಟುವದರ ಮೂಲಕ ಸಂಭ್ರಮದಿಂದ ರಕ್ಷಾ ಬಂಧನ ದಿನಾಚರಣೆಯ ಆಚರಣೆ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಜೈ ಭೀಮ ಸೇನಾ ರಾಜ್ಯ ಸಂಚಾಲಕ ಸಂತೋಷ ಭಾಸ್ಕರ ಜೈ ಭೀಮ ಸೇನಾ ಸಂಘಟನೆಯಿಂದ ನಾವು ಅನಾಥ ಆಶ್ರಮದಲ್ಲಿ ರಕ್ಷಾ ಬಂಧನದ ದಿನಾಚರಣೆ ಆಚರಿಸುತ್ತಿದ್ದೇವೆ, ಕಾರಣ ಇಷ್ಟೇ ಈ ಮಕ್ಕಳಿಗರ ನಾವು ಅನಾಥರು ಎಂಬ ಭಾವನೆ ಎಂದು ಬರಕೂಡದು, ರಕ್ಷಾ ಬಂಧನ ಆಚರಣೆ ಖುಷಿಯಲ್ಲಿ ಎಲ್ಲರಂತೆ ಇವರು ಆಚರಿಸಬೇಕು ಎಂಬುದೇ ನಮ್ಮ ಉದ್ದೇಶ ಎಂದರು. ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಘಟಕದ ಸದಸ್ಯೆ ಅಶ್ವಿನಿ ಕಾಲೇಬಾಗ ನಮಗೆ ಈ ಮಕ್ಕಳಿಗೆ ರಾಖಿ ಕಟ್ಟುವದರಿಂದ ಆ ಮಕ್ಕಳ ಮುಖದಲ್ಲಿ ಖುಷಿ ನೋಡಿ ತುಂಬಾ ಸಂತೋಷವಾಗುತ್ತಿದೆ, ಈ ಬಾರಿ ನಾವು ಅನಾಥ ಆಶ್ರಮದಲ್ಲಿ ಈ ದಿನಾಚರಣೆ ಆಚರಿಸಿದ್ದು ಸಂತಸ ತಂದಿದೆ ಎಂದರು. ಇದೇ ಸಂದರ್ಭದಲ್ಲಿ ನಗರ ಘಟಕ ಅದ್ಯಕ್ಷ ಪ್ರವೀಣ ಚವಡಿಕರ, ಉಪಾಧ್ಯಕ್ಷ ಸಚಿನ ಕಾಂಬಳೆ, ಕಾರ್ಯದರ್ಶಿ ರುದ್ರಪ್ಪ ಕೊಳ್ಳದ, ಸುನೀಲ್ ಹೊಸಳ್ಳಿ ಸೇರಿದಂತೆ ಮಹಿಳಾ ಘಟಕದ ಸದಸ್ಯರೂ ಉಪಸ್ಥಿತರಿದ್ದರು….

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ