ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ

Varta Mitra News

 

ಬೆಂಗಳೂರು,ಆ.22-ರಾಜ್ಯ ಒಕ್ಕಲಿಗರ ಸಂಘಕ್ಕೆ ಆಡಳಿತಾಕಾರಿ ನೇಮಕ ಮಾಡಿರುವುದನ್ನು ಸಂಘದ ಮಾಜಿ ಅಧ್ಯಕ್ಷ ಬಿ.ಕೆಂಚಪ್ಪಗೌಡ, ಮಾಜಿ ನಿರ್ದೇಶಕ ನೀಲಕಂಠ ಆರ್.ಗೌಡ ಸ್ವಾಗತಿಸಿದ್ದಾರೆ.
ಒಕ್ಕಲಿಗರ ಸಂಘಕ್ಕೆ ನಿವೃತ್ತ ಐಎಎಸ್ ಅಕಾರಿ ಎಚ್.ಎಸ್.ಅಶೋಕಾನಂದ ಅವರನ್ನು ಸರ್ಕಾರ ಆಡಳಿತಾಕಾರಿಯನ್ನಾಗಿ ನೇಮಕ ಮಾಡಿರುವುದು ಸಂತೋಷ ತರುವಂತಹ ವಿಚಾರ. ಆಡಳಿತಾಕಾರಿಗಳು ಸಂಘದಲ್ಲಿ ನಡೆದಿರುವ ಅಕ್ರಮಗಳನ್ನು ವಿಮರ್ಶೆ ಮಾಡಿ ನ್ಯಾಯ ಒದಗಿಸಬೇಕು. ಲೋಪದೋಷಗಳನ್ನು ಸರಿಪಡಿಸಿ ಸಂಘವನ್ನು ಸುಸ್ಥಿತಿಗೆ ತರಬೇಕು ಎಂದು ಅವರು ತಿಳಿಸಿದ್ದಾರೆ.
ನಿನ್ನೆ ಅಶೋಕಾನಂದ ಅವರು ಸಂಘದ ಆಡಳಿತಾಕಾರಿಯಾಗಿ ಅಕಾರ ವಹಿಸಿಕೊಂಡಿದ್ದಾರೆ. ಸಂಘದಲ್ಲಿ ಇದುವರೆಗೆ ನಡೆದಿರುವ ಅವ್ಯವಹಾರ, ಅಕ್ರಮಗಳ ಬಗ್ಗೆ ಗಂಭೀರವಾಗಿ ವಿಮರ್ಶೆ ಮಾಡಿ ಸಂಘಕ್ಕೆ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ