ಕುಂದುಕೊರತೆ ಅದಾಲತ್

ಬೆಂಗಳೂರು, ಆ.22- ಜಲಮಂಡಲಿಯ (ಈಶಾನ್ಯ-3) ಉಪವಿಭಾಗದಲ್ಲಿ ನಾಳೆ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆಯಲ್ಲಿ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಸಿದಂತೆ ನೀರಿನ ಅದಾಲತ್ ಅನ್ನು ನಾಳೆ ಬೆಳಿಗ್ಗೆ 9.30 ರಿಂದ 11ಗಂಟೆಯವರೆಗೆ ನಡೆಸಲಾಗುತ್ತದೆ.
ಉಪವಿಭಾಗದ ವ್ಯಾಪ್ತಿಗೆ ಬರುವ ಆರ್.ಟಿ.ನಗರ, ಕಾವಲ್ ಭೈರಸಂದ್ರ ಸಂಜಯನಗರ, ಬಿ.ಇ.ಎಲ್ ರಸ್ತೆ, ಸೇವಾಠಾಣೆಗಳಿಗೆ ಸಂಬಂಸಿದ ವಿವಾದಗಳನ್ನು 3ನೇ ಅಡ್ಡರಸ್ತೆ, ಪಿ ಟಿ ಕಾಲೋನಿ, ಆರ್.ಟಿ.ನಗರ ಇಲ್ಲಿ ನಡೆಸಲಿದ್ದು ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ಕಾರ್ಯನಿರ್ವಾಹಕ ಅಭಿಯಂತರರು (ಈಶಾನ್ಯ)22945124. ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು (ಈಶಾನ್ಯ-3) ಉಪವಿಭಾಗ-22945139.
ಕುಂದು ಕೊರತೆಗಳಿಗೆ ಸಂಬಂಸಿದಂತೆ ಮಂಡಲಿಯ 24/7 ದೂರುನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ-22238888, ಸಹಾಯವಾಣಿ 1916 ಹಾಗೂ ವಾಟ್ಸ್‍ಆಪ್ ಸಂಖ್ಯೆ-8762228888 ಗೆ ಸಂಪರ್ಕಿಸಬಹುದಾಗಿದೆ.
ಸಾರ್ವಜನಿಕರು ಮೇಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಅದಾಲತ್ ಸೌಲಭ್ಯ ಬಳಸಿಕೊಳ್ಳ ಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ