ಸ್ಯಾಂಡಲ್ ವುಡ್ ನಟ ಜೈ ಜಗದೀಶ್ ಕಾರು ಅಪಘಾತ, ಪ್ರಾಣಾಪಾಯದಿಂದ ಪಾರು

ಹಾಸನ: ಸ್ಯಾಂಡಲ್ ವುಡ್ ಹಿರಿಯ ನಟ ಜೈ ಜಗದೀಶ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು ಅದೃಷ್ಟವಶಾತ್ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ನಡೆದ ಘಟನೆಯಲ್ಲಿ ಜೈ ಜಗದೀಶ್ ಇದ್ದ ಕಾರು ಬೈಕ್ ಗೆ ಡಿಕ್ಕಿ ‍ಹೊಡೆಯುವುದರಲ್ಲಿತ್ತು. ಬೆಂಗಳೂರಿನಿಂದ ಮಡಿಕೇರಿಯ ಸಂಬಂಧಿಕರ ಮನೆಗೆ ತೆರಳುತ್ತಿದ್ದ ನಟ  ಚೆನ್ನರಾಯಪಟ್ಟಣ ಮೂಲಕ  ಪ್ರಯಾಣಿಸುತ್ತಿದ್ದರು.
ಕಾರಿಗೆ ಅಡ್ಡಲಾಗಿ ಬೈಕ್ ಬಂದ ತಕ್ಷಣ ಬೈಕ್ ಸವಾರನ ಪ್ರಾಣ ಉಳಿಸಲು ಜೈ ಜಗದೀಶ್ ಕಾರನ್ನು ತಿರುಗಿಸಿದ್ದಾರೆ. ಆಗ ಕಾರು ಜಮೀನಿಗೆ ಇಳಿದಿದ್ದು ಜಖಂ ಆಗಿದೆ..
ಅಪಘಾತದಲ್ಲಿ ಜೈ ಜಗದೀಶ್ ಅವರಿಗೆ ಸಣ್ಣ ಪುತ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ