ಇಬ್ಬರು ಮಹಾನ್ ವ್ಯಕ್ತಿಗಳ ಬಗ್ಗೆ ವಾಚಕ ಮಹಾಶಯರ ಉದ್ಘಾರ

ಯಾರ್ಯಾರೋ ಸತ್ರು
ಇಷ್ಟು ಜನ ಮಕ್ಕಳನ್ನು ,ಮೊಮ್ಮಕ್ಕಳನ್ನು ,ಇಷ್ಟು ಆಸ್ತಿಯನ್ನು ಬಿಟ್ಟು ಹೋದರು ಅಂತ ನ್ಯೂಸ್ ಲಿ ಬರ್ತಿತ್ತು.

ಇಬ್ರು ಸತ್ತರು ಏನನ್ನು ಬಿಟ್ಟು ಹೋಗಲಿಲ್ಲ ಶೋಕದ ಹೊರತು.
ಗಳಿಸಿದ್ದು ಅಪಾರ ಪ್ರೀತಿ ಅಭಿಮಾನ ಪಕ್ಷಾತೀತವಾಗಿ .

ಈ ಇಬ್ಬರು ದೇಶವನ್ನೇ ಮನೆ ಮಾಡಿಕೊಂಡು,ಜನರನ್ನೇ ಸಂಬಂಧಿ ಮಾಡಿಕೊಂಡಿದ್ರು .

ಒಬ್ಬರು ಕಲಾಮ್ ಮತ್ತೊಬ್ಬರು ಅಟಲ್ ಜಿ..

ನಾವು ಮಹಾತ್ಮ ಗಾಂಧಿಯನ್ನು ಕಂಡಿಲ್ಲ, ಆದರೆ ನಾವು ಕಂಡ ಮಹಾತ್ಮರು ಇನ್ನಿಲ್ಲ….

ಅಟಲ್ಜೀ ಹಾಗೂ ಕಲಾಮ್ ಅವರ ಬಾಂಧವ್ಯ ಮತ್ತು ಅಟಲ್ಜೀ ತಮಾಷೆ ವ್ಯಕ್ತಿತ್ವದವರು ಅನ್ನೊದಕ್ಕೆ ಒಂದು ಸಣ್ಣ ಘಟನೆ ಹೇಳ್ತೀನಿ .
ಅಟಲ್ಜೀ ಅಧೀಕಾರಕ್ಕೆ ಬರುವಾಗಲೇ ಈ ದೇಶವನ್ನು ಪರಮಾಣು ಶಕ್ತ ರಾಷ್ಟ್ರವನ್ನಾಗಿ ಮಾಡ್ತೀನಿ ಅಂತ ಹೇಳಿದ್ದರು ಅದಕ್ಕೆ ಕಲಾಮ್ ರವರನ್ನು ಕರೆಸಿ ಕೇಳಿದ್ರಂತೆ ಅದ್ಕೆ ನೀವ್ ಏನು ತಲೆ ಕಡ್ಸ್ಕೊಬೇಡಿ ನೀವೂ ಅಧಿಕ್ಕಾರಕ್ಕೆ ಬರುತ್ತೀರ ಅಂತ ಗೊತ್ತಿದ್ದು ಮತ್ತೆ ಆ ಕೆಲಸ ನಿಮ್ಮಿಂದ ಮಾತ್ರ ಸಾಧ್ಯ ಅಂತ ತಿಳಿದು ನಾನು ಎಲ್ಲಾ ವ್ಯವಸ್ಥೆ ಮಾಡದ್ದೀನಿ ಇನ್ನೊಂದು 6ತಿಂಗಳು ಕಾಲವಕಾಶ ಕೊಡಿ ಸಾಕು ಅಂದ್ರಂತೆ ಆಗ ಅಟಲ್ಜೀ ಆಯ್ತು ಮಾಡಿ ನನ್ನಿಂದ ಏನು ಸಹಾಯ ಆಗುತ್ತೋ ನಾನು ಮಾಡ್ತೀನಿ ಅಂದ್ರು . ಆಗ ಕಲಾಮ್ ಇಲ್ಲಿ ಒಂದು ಸಮಸ್ಯೆ ಇದೆ ಈ ಮಾಹಿತಿ ಎಲ್ಲೂ leak out ಆಗಬಾರದು ಯಾಕೆ ಅಂದರೆ America ಗೆ ಗೊತ್ತಾದರೆ ನಮ್ಮ ಮೇಲೆ ಒತ್ತಡ ಹೇರಿ ಈ ಕೆಲಸ ಮಾಡಲು ಬಿಡಲ್ಲ ಅಂತ.
ಆಗ ಅಟಲ್ ಜೀ ಹೇಳಿದ್ರಂತೆ ನೀವು ಅದರ ಬಗ್ಗೆ ಚಿಂತೆ ಬೇಡ ಎಲ್ಲೂ ವಿಷಯ leak out ಆಗಲ್ಲ ಯಾಕೆ ಅಂದರೆ
” ನನಗೂ ಮದುವೆ ಆಗಿಲ್ಲ , ನಿಮಗೂ ಮದುವೆ ಆಗಿಲ್ಲ” ಮತ್ತೆ ವಿಷಯ leak out ಆಗೋದು ಹೇಗೆ ಅಂತ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ