ಅಟಲ್ ಜಿ ಅವರ ನಿಧನ ಒಂದು ಯುಗದ ಅಂತ್ಯವಾಗಿದೆ: ಪ್ರಧಾನಿ ಸಂತಾಪ

ನವದೆಹಲಿ:ಆ-16: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಭಾರತ ನಮ್ಮ ಅಚ್ಚುಮೆಚ್ಚಿನ ಅಟಲ್​ಜಿ ಅವರ ಮರಣದ ದುಃಖದಲ್ಲಿದೆ. ಅವರ ನಿಧನದಿಂದಾಗಿ ಒಂದು ಯುಗದ ಅಂತ್ಯವಾಗಿದೆ. ಎಂದು ದು:ಖ ವ್ಯಕ್ತಪಡಿಸಿದ್ದಾರೆ.

ಅಟಲ್ ಜೀ ಅವರು ದೇಶಕ್ಕಾಗಿಯೇ ಬದುಕಿದ್ದರು ಮತ್ತು ದಶಕಗಳ ಕಾಲ ದೇಶಕ್ಕಾಗಿಯೇ ದೃಢವಾಗಿ ಸೇವೆ ಸಲ್ಲಿಸಿದರು. ಇಂದು ಅವರು ನಮ್ಮ ಜತೆ ಇಲ್ಲ, ನಾನು ನನ್ನ ತಂದೆ ಕಳೆದುಕೊಂಡಿದ್ದೇನೆ. ಅವರು ಬಿಟ್ಟು ಹೋದ ಶೂನ್ಯವನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

“ನನಗೆ ಯಾವುದೇ ಮಾತುಗಳು ಬರುತ್ತಿಲ್ಲ, ನಾನೀಗ ಭಾವುಕನಾಗಿದ್ದೇನೆ. ಅವರು ತನ್ನ ಜೀವನದ ಪ್ರತಿ ಕ್ಷಣವನ್ನೂ ದೇಶಕ್ಕೆ ಸಮರ್ಪಿಸಿಕೊಂಡಿದ್ದರು ಎಂದು ಮೋದಿ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ