ಆ.15 ರಂದು ಸಂಗೊಳ್ಳಿರಾಯಣ್ಣನವರ 221ನೇ ಜನ್ಮದಿನೋತ್ಸವ

 

ಬೆಂಗಳೂರು, ಆ.13-ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ.15 ರಂದು ಸಂಗೊಳ್ಳಿರಾಯಣ್ಣನವರ 221ನೇ ಜನ್ಮದಿನೋತ್ಸವವನ್ನು ಹಾಲುಮತ ಮಹಾಸಭಾ ವತಿಯಿಂದ ಫ್ರೀಡಂಪಾರ್ಕ್‍ನಲ್ಲಿ ಆಯೋಜಿಸಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ನಾಗರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ಆಟೋ ಮತ್ತು ಬೈಕ್ ಬೃಹತ್ ರ್ಯಾಲಿಯನ್ನು ಹಮ್ಮಿಕೊಂಡಿದ್ದ ಬೆಳಗ್ಗೆ 9.15ಕ್ಕೆ ಮೂಡಲಪಾಳ್ಯ ವೃತ್ತದಿಂದ ವಿಜಯನಗರ, ಮೈಸೂರು ರಸ್ತೆ, ಗೂಡ್‍ಶೆಡ್ ರಸ್ತೆ ಮುಖಾಂತರ ಸಂಗೊಳ್ಳಿರಾಯಣ್ಣ ನಿಲ್ದಾಣದವರೆಗೂ ರ್ಯಾಲಿ ನಡೆಸಿ 10.30ಕ್ಕೆ ಸಂಗೊಳ್ಳಿರಾಯಣ್ಣ ನವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. ನಂತರ ಫ್ರೀಡಂಪಾರ್ಕ್‍ಗೆ ತೆರಳಿ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.
ಕಾಳಿದಾಸ ಹೆಲ್ತ್ ಟ್ರಸ್ಟ್ ವತಿಯಿಂದ ಉಚಿತ ಮಧುಮೇಹ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಅಣ್ಣಯ್ಯಪ್ಪ, ಮಹದೇವರಾಜ್, ಸಮಾಜದ ಹಿರಿಯ ಮುಖಂಡ ಟಿ.ಶಿವಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ