ಅಮರೇಶ್ವರ ವಿಜಯ ನಾಟಕ ಮಂಡಳಿ 72ನೇ ಸ್ವಾತಂತ್ರ್ಯೋತ್ಸವ

 

ಬೆಂಗಳೂರು,ಆ.11- ತುಮಕೂರಿನ ಅಮರೇಶ್ವರ ವಿಜಯ ನಾಟಕ ಮಂಡಳಿ 72ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇದೇ 14-15 ರಂದು ಕಾಮಾಕ್ಷಿಪಾಳ್ಯದ ವೃಷಭಾವತಿ ನಗರದ ಶ್ರೀ ರಾಘವೇಂದ್ರ ಪ್ರೌಢಶಾಲಾ ಆವರಣದಲ್ಲಿ ಅಮರ ರಂಗೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅಂದು ಸಂಜೆ 6 ಗಂಟೆಗೆ ಗುರಾಜ್ ಶಾಸ್ತ್ರಿ ರಚನೆಯ, ಧನ್ವಂತ್ರಿ ನಿರ್ದೇಶನ, ಚಕ್ರಧರ-ಜಾನಪದ ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರ. 7.30ಕ್ಕೆ ಯು.ಗೋವಿಂದೇಗೌಡ ರಚನೆ -ನಿರ್ದೇಶನ ಧನ್ವಂತ್ರಿಬಿ.ಎ ಅವರ ಸಹನಿರ್ದೇಶನದಲ್ಲಿ ಮಿ.ಡೂಪ್ಲಿಕೇಟ್-ಹಾಸ್ಯ ನಾಟಕವನ್ನು ಪ್ರದರ್ಶಿಸಲಾಗುತ್ತದೆ.
15ರಂದು ಬೆಳಗ್ಗೆ 8 ಗಂಟೆಗೆ ಸ್ವಾತಂತ್ರ್ಯೋತ್ಸವ ದಿನಾಚರಣೆ, ಉಪನ್ಯಾಸ, ಎರಡು ತಿಂಗಳ ರಂಗಶಿಕ್ಷಣ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಏರ್ಪಡಿಸಲಾಗಿದೆ.
ಕವಿ-ಕಥೆಗಾರ ರವಿ ವಿಠಲ ಅಲಬಾಳ ಅವರು ಉಪನ್ಯಾಸ ನೀಡಲಿದ್ದು, ಶ್ರೀ ರಾಘವೇಂದ್ರ ಪ್ರೌಢಶಾಲೆಯ ಕಾರ್ಯದರ್ಶಿ ಎಚ್.ಎಲ್.ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಂಡಳಿಯ ಅಧ್ಯಕ್ಷ ಚನ್ನಬಸಯ್ಯಗುಬ್ಬಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ