ಅಮಾಯಕರನ್ನು ಹೆದರಿಸಿ ಹಣ ಮತ್ತು ಆಭರಣಗಳನ್ನು ವಸೂಲಿ

 

ಬೆಂಗಳೂರು, ಆ.11-ಅಮಾಯಕರನ್ನು ಹೆದರಿಸಿ ಹಣ ಮತ್ತು ಆಭರಣಗಳನ್ನು ವಸೂಲಿ ಮಾಡುತ್ತಿದ್ದ ಮಹಿಳೆ ಸೇರಿ ಮೂವರನ್ನು ಉತ್ತರ ವಿಭಾಗದ ಸೋಲದೇವನಹಳ್ಳಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ನಿವಾಸಿ ಪವನ್‍ಕುಮಾರ್ (25), ಮಡಿವಾಳದ ಸಿದ್ಧಾರ್ಥ (45), ಚಿಕ್ಕಬಾಣಾವರದ ಅರ್ಪಿತಾ(22) ಬಂಧಿತ ಆರೋಪಿಗಳು.
ಆರೋಪಿಗಳಿಂದ ಸುಮಾರು 1.35ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, 35 ಸಾವಿರ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಸೋಲದೇವನಹಳ್ಳಿ ಪೆÇಲೀಸರು ಯಶಸ್ವಿಯಾಗಿದ್ದಾರೆ.
ಜು.29ರಂದು ಬೆಳಗ್ಗೆ 11ಗಂಟೆಯಲ್ಲಿ ಪರಿಚಯವಿರುವ ಅರ್ಪಿತಾ ಎಂಬುವರು ತಮ್ಮನ್ನು ಮನೆಗೆ ಕರೆಸಿಕೊಂಡಿದ್ದಾಗ ವ್ಯಕ್ತಿಯೊಬ್ಬ ತಾನು ಪೆÇಲೀಸ್ ಎಂದು ಹೇಳಿಕೊಂಡು ಬಂದು ಬೆದರಿಸಿ ಹಣ ಕಿತ್ತುಕೊಂಡಿದ್ದ ಬಗ್ಗೆ ದಯಾನಂದ ಎಂಬುವರು ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ತನಿಖೆ ನಡೆಸಿ ಮೂವರನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ