ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ

ಹುಬ್ಬಳ್ಳಿ:- ವ್ಯಕ್ತಿಯೋರ್ವನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಗೈದು, ಶವವನ್ನ ರಸ್ತೆ ಪಕ್ಕದಲ್ಲಿ ಎಸೆದು ಹೋದ ಘಟನೆ ಕಲಘಟಗಿ ತಾಲೂಕಿನ ಗಳಿಗಿ ಹುಲಕೊಪ್ಪದ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿ ಮೂಲತಃ ಬೆಳಗಾವಿಯವರು, ಹಾಲಿ ಹುಬ್ಬಳ್ಳಿ ಅರವಿಂದ ನಗರದ ನಿವಾಸಿ ಸುನೀಲ ಅಲಿಯಾಸ ಪಿಂಟು ಮಾಂಗಗೋರೆ(40) ಎಂದು ಗುರುತಿಸಲಾಗಿದೆ. ಸುನೀಲ ಅಲಿಯಾಸ್ ಪಿಂಟು ಎಂಬುವರನ್ನು ಜುಲೈ 29 ರಂದು ಕೊಲೆಗೈದು ಗಳಗಿಹುಲಕೊಪ್ಪ ಗ್ರಾಮದ ರಸ್ತೆ ಪಕ್ಕದಲ್ಲಿ ಎಸೆಯಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಕಲಘಟಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಳೇ ವೈಷಮ್ಯವೇ ಕೊಲೆಗೆ ಕಾರಣ‌ ಎನ್ನಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ