ವೈದ್ಯರ ಮುಷ್ಕರಕ್ಕೆ ಹಸುಗೂಸು ಬಲಿ

ಬೆಳಗಾವಿ,ಜು.28- ವೈದ್ಯರ ಮುಷ್ಕರಕ್ಕೆ ನಿನ್ನೆಯಷ್ಟೇ ಜನಿಸಿದ್ದ ಹಸುಗೂಸುವೊಂದು ಬಲಿಯಾಗಿದೆ.
ಎನ್‍ಎಂಸಿ ಮಸೂದೆಗೆ ವಿರೋಧಿಸಿ ರಾಜ್ಯಾದ್ಯಂತ ವೈದ್ಯರ ಮುಷ್ಕರದ ಬಿಸಿ ಬೆಳಗಾವಿಗೆ ತಟ್ಟಿದ್ದು , ಸೂಕ್ತ ಚಿಕಿತ್ಸೆ ಸಿಗದೆ ಮಗು ಬಲಿಯಾಗಿದೆ ಎನ್ನಲಾಗಿದೆ. ಗೋಕಾಕ್ ನಗರ ನಿವಾಸಿಯಾದ ಬಸಪ್ಪ ಎಂಬುವರ ಮಗು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು, ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ.
ನಿನ್ನೆಯಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ್ದ ಮಗು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು , ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ತರಲಾಗಿತ್ತು. ಮುಷ್ಕರದ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ