ಸ್ಥಳೀಯ ಬಿಜೆಪಿ ನಾಯಕರ ಹತ್ಯೆ

ಡೈಮಂಡ್ ಹಾರ್ಬರ್(ಪ.ಬಂಗಾಳ), ಜು.28- ಪಶ್ಚಿಮ ಬಂಗಾಳದ ಸೌಥ್ 24 ಪರಗಣ ಜಿಲ್ಲೆಯ ಸ್ಥಳೀಯ ಬಿಜೆಪಿ ನಾಯಕರೊಬ್ಬರನ್ನು ದುಷ್ಕರ್ಮಿಗಳು ಕೊಚ್ಚಿ ಬರ್ಬರವಾಗಿ ಕೊಂದಿರುವ ಕೃತ್ಯ ಡೈಮಂಡ್ ಬಜಾರ್ ಜಿಲ್ಲೆಯ ಮಂದಿರ್ ಬಜಾರ್‍ನಲ್ಲಿ ನಿನ್ನೆ ರಾತ್ರಿ ನಡೆದಿದೆ. ಮಂದಿರ್ ಬಜಾರ್ ಪ್ರದೇಶದ ಬಿಜೆಪಿ ಮಂಡಲ್ ಸಮಿತಿ ಕಾರ್ಯದರ್ಶಿ ಶಕ್ತಿಪಾದ ಸರ್ದಾರ್(45) ದುಷ್ಕರ್ಮಿಗಳಿಂದ ಹತ್ಯೆಯಾದ ಸ್ಥಳೀಯ ಮುಖಂಡ.
ನಿನ್ನೆ ರಾತ್ರಿ ಮನೆಗೆ ಹಿಂದಿರುಗುತ್ತಿದ್ದ ಅವರನ್ನು ಅಪರಿಚಿತ ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಹಾಕಿ ಪರಾರಿಯಾದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ