ಉದ್ಯೋಗ ಸಿಗಲಿಲ್ಲವೆಂಬ ಕಾರಣಕ್ಕೆ ಯುವಕ ಆತ್ಮಹತ್ಯೆ

Execution Sling Hanging Hangman Knot Penalty Rope

ದಾವಣಗೆರೆ, ಜು.4- ಪದವೀಧರನಾದರೂ ಉದ್ಯೋಗ ಸಿಗಲಿಲ್ಲವೆಂಬ ಕಾರಣಕ್ಕೆ ನೊಂದ ಯುವಕನೊಬ್ಬ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವಂತೆ ಮುಖ್ಯಮಂತ್ರಿಗಳ ಹೆಸರಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಗಿರಿ ತಾಲೂಕು ಹೊಸನಗರದಲ್ಲಿ ನಡೆದಿದೆ. ಹೊಸನಗರದ ಬಿ.ಅನಿಲ್ (21) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಈತ ಬಾಬು ನಾಯಕ್-ಗೀತಾಬಾಯಿ ದಂಪತಿಯ ಮಗ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇಂದು ಧಾರವಾಡಕ್ಕೆ ಹೋಗಬೇಕಿತ್ತು. ಆದರೆ, ಮನೆಯಲ್ಲಿನ ತೀವ್ರ ಬಡತನದಿಂದ ನೊಂದಿದ್ದ ಈತ ನಿನ್ನೆ 30 ಸೆಕೆಂಡ್‍ಗಳ ಧ್ವನಿಮುದ್ರಿತ ವಾಟ್ಸಾಪ್ ಸಂದೇಶವನ್ನು ಮುಖ್ಯಮಂತ್ರಿಗಳ ಹೆಸರಿಗೆ ಕಳುಹಿಸಿ ನಂತರ ಜಮೀನಿನಲ್ಲಿದ್ದ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉದ್ಯೋಗ ಸಮಸ್ಯೆ ನಿವಾರಿಸಿ, ಬಡ ಗ್ರಾಮೀಣ ಪದವೀಧರರ ಸಮಸ್ಯೆಗೆ ನಾಂದಿ ಹಾಡಬೇಕೆಂದು ರಾಜ್ಯದ ಮುಖ್ಯಮಂತ್ರಿಗಳಲ್ಲಿ ಅತ್ಯಂತ ಬುದ್ಧಿವಂತ ಮುಖ್ಯಮಂತ್ರಿಯಾದ ನೀವು ಬಗೆಹರಿಸಬೇಕೆಂದು ಎಚ್.ಡಿ.ಕುಮಾರಸ್ವಾಮಿ ಅವರ ಹೆಸರಿಗೆ ಅನಿಲ್ ಸಂದೇಶ ರವಾನಿಸಿದ್ದಾನೆ.
ಚನ್ನಗಿರಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಅನಿಲ್‍ನ ಮೊಬೈಲ್ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ