ಕಲಾಪವನ್ನು ನಾಳೆಗೆ ಮುಂದೂದಿಕೆ

 

ಬೆಂಗಳೂರು, ಜು.2- ಇತ್ತೀಚೆಗೆ ನಿಧನರಾದ ವಿಧಾನಪರಿಷತ್ ಸದಸ್ಯ ಸಯ್ಯರ್ ಮುದೀರ್ ಆಗಾ, ಮಾಜಿ ಶಾಸಕರಾದ ಸಿದ್ದುನ್ಯಾಮೆಗೌಡ, ಕೆ.ಎಚ್.ಹನುಮೇಗೌಡ, ಮಾಜಿ ಮುಖ್ಯ ಸಚೇತಕ ಟಿ.ಎಚ್.ನಾರಾಯಣಸ್ವಾಮಿ, ಡಾ.ಮಹದೇವಪ್ಪ ಶಿವಬಸಪ್ಪ ಪಟ್ಟಣ್ ಅವರ ನಿಧನಕ್ಕೆ ಮೇಲ್ಮನೆಯಲ್ಲಿಂದು ಸಂತಾಪ ಸೂಚಿಸಿ ಮೃತರ ಗೌರವಾರ್ಥ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.
ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿ ಮಾತನಾಡಿದ ಸಭಾಪತಿ ಬಸವರಾಜಹೊರಟ್ಟಿ, ಮೃತರ ಗುಣಗಾನ ಮಾಡಿ, ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದರು.
ಸಭಾನಾಯಕಿ ಜಯಮಾಲಾ, ವಿಪಕ್ಷ ನಾಯಕ ಕೋಟಾ ಶ್ರೀನಿವಾಸಪೂಜಾರಿ ಸಂತಾಪ ಸೂಚಿಸಿ ಮಾತನಾಡಿ, ವಿಧಾನಪರಿಷತ್ ಸದಸ್ಯರು, ಹಾಲಿ ಹಾಗೂ ಮಾಜಿ ಶಾಸಕರ ಸೇವೆಯನ್ನು ಪ್ರಶಂಸಿಸಿದರು.
ಮೃತರ ಗೌರವಾರ್ಥ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ