ಅನಾರೋಗ್ಯದ ನಡುವೆಯೂ ಅಧಿವೇಶನಕ್ಕೆ ಆಗಮಿಸಿದ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ

 

ಬೆಂಗಳೂರು,ಜು.2- ಇಂದು ನಡೆದ ವಿಧಾನಸಭೆ ಜಂಟಿ ಅಧಿವೇಶನಕ್ಕೆ ಅನಾರೋಗ್ಯದ ನಡುವೆಯೂ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಪಾಲ್ಗೊಂಡರು.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನವಾದ ಇಂದು ರಾಜ್ಯಪಾಲರು ಭಾಷಣ ಮಾಡಲಿದ್ದು, ಅಧಿವೇಶನದಲ್ಲಿ ಪಾಲ್ಗೊಳ್ಳಲು ಅಲ್ಲಂ ವೀರಭದ್ರಪ್ಪ ವಾಕರ್ ಸಹಾಯದಿಂದ ಸಭೆಗೆ ಆಗಮಿಸಿದರು.
ವಿಧಾನಸೌಧಕ್ಕೆ ಕಾರಿನಲ್ಲಿ ಆಗಮಿಸಿದ ಅವರು, ವಿಧಾನಸಭೆ ಸಭಾಂಗಣಕ್ಕೆ ವಾಕರ್ ಮೂಲಕ ಆಗಮಿಸಿದಾಗ ಮಾರ್ಷಲ್‍ಗಳು ಅವರ ನೆರವಿಗೆ ನಿಂತರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ