ದೇಶದ ನೀಚ ಮಂತ್ರಿ ಅಂದ್ರೆ ಅನಂತಕುಮಾರ್ ಹೆಗಡೆ: ಆನಂದ್ ಅಸ್ನೋಟಿಕರ್

ಕಾರವಾರ: ಭಾರತ ದೇಶದ ಅತ್ಯಂತ ನೀಚ ಮಂತ್ರಿ ಅಂದ್ರೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಯಾರೋ ಹಾರಿಸಿರುವ ಧ್ವಜವನ್ನು ನಾನು ಹಾರಿಸಿದ್ದೇನೆಂದು ಹೇಳುವ ಮೂಲಕ ತಾವು ಆರ್‍ಎಸ್‍ಎಸ್‍ನಲ್ಲಿ ದೊಡ್ಡ ಕೆಲಸ ಮಾಡಿದ್ದೇನೆ ಎಂದು ಅನಂತಕುಮಾರ್ ಹೆಗಡೆ ಹೇಳಿಕೊಳ್ಳುತ್ತಾರೆ. ಅದು ಹೇಗೆ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೋ ಗೊತ್ತಿಲ್ಲ. ಜೀವನದಲ್ಲಿಯೇ ಹೆಗಡೆಗೆ ಮಂತ್ರಿ ಸ್ಥಾನ ಸಿಗುತ್ತಿರಲಿಲ್ಲ. ಇರಲಿ ಎಂದು ಕರುಣೆ ತೋರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಚಿವ ಸ್ಥಾನ ನೀಡಿದ್ದಾರೆ ಎಂದು ಅವನು, ಇವನು ಅಂತಾ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಅನಂತಕುಮಾರ್ ಹೆಗಡೆಗೆ ಸಚಿವ ಸ್ಥಾನ ನೀಡಿದ್ದಕ್ಕೆ ಅಮಿತ್ ಶಾ ಇಂದು ಪಶ್ಚಾತ್ತಾಪ ಪಡುತ್ತಿದ್ದಾರೆ. ಅಮಿತ್ ಶಾ ಬಿಸಿ ತುಪ್ಪವನ್ನು ಬಾಯಿಗೆ ಹಾಕಿಕೊಂಡಿದ್ದು, ನುಂಗುವ ಹಾಗಿಲ್ಲೂ ಇತ್ತ ಉಗುಳುವ ಹಾಗಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ರು.

ಅನಂತಕುಮಾರ್ ಹೆಗಡೆಗೆ ಹಿರಿಯರಿಗೆ ಗೌರವ ಕೊಡುವುದು ಗೊತ್ತಿಲ್ಲ. ಈ ಹಿಂದೆ ವೈದ್ಯರ ಮೇಲೆಯೂ ಹಲ್ಲೆ ನಡೆಸಿದ್ದು, ಎಲ್ಲರಿಗೂ ಗೊತ್ತಿದೆ. ಈ ಬಾರಿ ಚುನಾವಣೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ವಿರೋಧ ಮಾಡಿದ್ದರು. ಹಲವು ಬಾರಿ ಕಾಗೇರಿಯವರನ್ನು ಅವಮಾನಿಸಿದ್ದು, ಒಮ್ಮೆ ಚಪ್ಪಲಿಯಲ್ಲಿಯೇ ಹೊಡೆದಿದ್ದರು. ನಾನು ಕಂಡ ಅತ್ಯಂತ ನೀಚ ಸಂಸದ ಅನಂತಕುಮಾರ್ ಹೆಗಡೆ ಎಂದು ಅಸ್ನೋಟಿಕರ್ ಆಕ್ರೋಶ ಹೊರಹಾಕಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ