ಆಶ್ರಯ ನಿವಾಸಿಗಳಿಗೆ ಅನ್ಯಾಯ- ಪಾಲಿಕೆ ಮುತ್ತಿಗೆ ಯತ್ನ

ಹುಬ್ಬಳ್ಳಿ- ಜಗದೀಶ್ ನಗರ ಆಶ್ರಯ ಬಡಾವಣೆಯ ಮೂಲ ಫಲಾನುಭವಿಗಳಿಗೆ ಮಹಾನಗರ ಪಾಲಿಕೆಯಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಜಗದೀಶ್ ನಗರ ಆಶ್ರಯ ಬಡಾವಣೆ ಹಿತರಕ್ಷಣಾ ಸಮಿತಿಯಿಂದದ ಪಾಲಿಕೆ ಕಚೇರಿಗೆ ಮುತ್ತಿಗೆಗೆ ಯತ್ನಿಸಲಾಯಿತು. ಜಗದೀಶ್ ನಗರ ಬಡಾವಣೆ ವ್ಯಾಪ್ತಿಯ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ, ಆಶ್ರಯ ಬಡಾವಣೆ ಮೂಲ ಫಲಾನುಭವಿಗಳನ್ನ ಒಕ್ಕಲೆಬ್ಬಿಸಿದ್ದಾರೆಂದು ಆರೋಪಿಸಿದ‌ ಪ್ರತಿಭಟನಾಕಾರರು ಪಾಲಿಕೆ ವಿರುದ್ಧ ಘೋಷಣೆ ಕೂಗಿದರು. ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ತಡಮಾಡಿದ ಪಾಲಿಕೆ ಆಯುಕ್ತ ಸುಧೀರ್ ಸರಾಫ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ