ನಮ್ಮಲ್ಲಿ ಯಾವುದೇ ಶೀತಲ ಸಮರ ನಡೆದಿಲ್ಲ – ಡಾ.ಜಿ.ಪರಮೇಶ್ವರ್

ಕೊಪ್ಪಳ, ಜೂ.27- ನಮ್ಮಲ್ಲಿ ಯಾವುದೇ ಶೀತಲ ಸಮರ ನಡೆದಿಲ್ಲ. ಕೆಲವರು ಸರ್ಕಾರದ ಆಯಸ್ಸು ಎರಡು ವರ್ಷ, ಒಂದು ವರ್ಷ, ಆರು ತಿಂಗಳು ಎಂದು ಹೇಳುತ್ತಾರೆ. ಆದರೆ, ಅವರ ಮಾತುಗಳೆಲ್ಲ ಅಪ್ರಸ್ತುತ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.
ಉಜಿರೆ ಶಾಂತಿವನದಲ್ಲಿ ಸಿದ್ದರಾಮಯ್ಯ ಅವರು ಸರ್ಕಾರ ಲೋಕಸಭಾ ಚುನಾವಣೆ ನಂತರ ಏನಾಗುತ್ತದೋ ಎಂಬುದರ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಸದ್ಯ ಎದ್ದಿರುವ ಆತಂಕದ ಕುರಿತು ಇಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರು ಪರಮೇಶ್ವರ್, ಯಾರಿಗೂ ಅನುಮಾನ ಬೇಡ. ಐದು ವರ್ಷ ಸುಭದ್ರ ಆಡಳಿತ ನqಯುತ್ತದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ