ಯಕ್ಷಗಾನ ಅಕಾಡೆಮಿ ಸದಸ್ಯತ್ವ : ಸ್ವರ್ಣವಲ್ಲಿ ಶ್ರೀಗಳ ಹರ್ಷ

ಶಿರಸಿ :

ಶ್ರೀ ನಾಗರಾಜ ಜೋಶಿ ಸೋಂದಾ ಇವರು ಕರ್ನಾಟಕ ಸರಕಾರದ ಯಕ್ಷಗಾನ ಅಕಾಡಮಿಯ ಸದಸ್ಯರಾಗಿ ನಿಯುಕ್ತಿಗೊಂಡಿದ್ದಕ್ಕೆ ಜಾಗೃತ ವೇದಿಕೆ (ರಿ) ಯ ಗೌರವಾಧ್ಯಕ್ಷರೂ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಹರ್ಷವ್ಯಕ್ತಪಡಿಸಿ ಆಶೀರ್ವದಿಸಿದ್ದಾರೆ.

ಶ್ರೀಯುತ ನಾಗರಾಜ ಜೋಶಿಯವರು ಸೋಂದಾ ಜಾಗೃತ ವೇದಿಕೆಯ ಸಕ್ರೀಯ ಸದಸ್ಯರಾಗಿದ್ದು ಕಳೆದ 30 ವರ್ಷಗಳಿಂದ ಯಕ್ಷಗಾನ, ನಾಟಕ, ಚಲನಚಿತ್ರ ಹಾಗೂ ವಿವಿಧ ಕಲಾ ಪ್ರಾಕಾರಗಳ ಕುರಿತಾಗಿ ಕೆಲಸ ನಿರ್ವಹಿಸಿ ಪರಿಣತಿ ಹೊಂದಿ ಸ್ವರ್ಣವಲ್ಲೀ ಮಹಾಸಂಸ್ಥಾನದ ಅಂಗ ಸಂಸ್ಥೆ ಯಕ್ಷ ಶಾಲ್ಮಲಾದ ಸಂಸ್ಥಾಪಕ ಕಾರ್ಯದರ್ಶಿಯಾಗಿ ಶ್ರಮಿಕ ಬಾಲರ ರಂಗ (ಶಬರ) ಸೋಂದಾ ಇದರ ಸ್ಥಾಪಕರಾಗಿ ಮುನ್ನಡೆಸುತ್ತಿದ್ದು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆದರಣೀಯ ವ್ಯಕ್ತಿಗಳಾಗಿದ್ದಾರೆ. ಇವರ ಕಾರ್ಯತತ್ಪರತೆ, ನಿಷ್ಠೆ, ಪ್ರಾಮಾಣಿಕ ಸೇವೆ ಇವುಗಳನ್ನು ಗಮನಿಸಿ ಯಕ್ಷಗಾನ ಅಕಾಡಮಿಯ ಸದಸ್ಯರನ್ನಾಗಿ ಅಕಾಡಮಿಯ ಅಧ್ಯಕ್ಷರ ವಿವೇಚನಾ ಕೋಟಾದಡಿಯಲ್ಲಿ ಆಯ್ಕೆಯಾಗಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸೋಂದಾ ಜಾಗೃ ವೇದಿಕೆ (ರಿ), ಶ್ರೀ ರಾಜ ರಾಜೇಶ್ವರ ಕ್ರೀಡಾ ಮತ್ತು ಸಂಸ್ಕೃತಿಕ ಸಂಘ ಸೋಂದಾ ಹಾಗೂ ಸಮಸ್ತ ಸುಧಾಪುರದ ನಾಗರೀಕರು ಸಲ್ಲಿಸಿದ್ದಾರ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ