ಸಿಎಂ ರಾಜೀನಾಮೆ ಕೇಳಿದ್ದ ಪೋಲಿಸ್ ಪೆದೇ ಅಮನಾತು

ಹುಬ್ಬಳ್ಳಿ- ಮುಖ್ಯಮಂತ್ರಿ ಕುಮಾರ ಸ್ವಾಮಿ ವಿರುದ್ದ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಹಾಕಿದ್ದ ಶಹರ ಠಾಣೆಯ ಪೊಲೀಸ್ ಪೇದೆ ಅರುಣ್ ಡೊಳ್ಳಿನನ್ನು ಅಮಾನತು ಮಾಡಿ ಹು-ಧಾ ಪೊಲೀಸ್ ಕಮೀಷನರ್ ಎಂ ಎನ್ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಸಾಲ‌ಮನ್ನಾ ಯಾವಾಗ ಮಾಡುತ್ತೀರಿ. ಸಾಲ ಮನ್ನಾ ಮಾಡದಿದ್ರೆ ರಾಜೀನಾಮೆ ನೀಡಿ ಎಂದು ಪೊಸ್ಟ್ ಶೇರ್ ಮಾಡಿದ್ದ. ಈ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದರಿಂದ ಎಚ್ಚೆತುಕೊಂಡ ಪೊಲೀಸ್ ಆಯುಕ್ತ ಎಂ ಎನ್‌ ನಾಗರಾಜ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ‌ ಪೇದೆ ಅರುಣ್ ಡೊಳ್ಳಿನ್ ವಿರುದ್ದ ತನಿಖೆಗೆ ಆದೇಶ ನೀಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ಕಮೀಷನರ್ ಗೂ ಶೋಕಾಸ್ ನೋಟಿಸ್ ನೀಡಿದೆ.‌ ಈ ವಿಷಯ ಯಾಕೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ