ಸಿಆರ್‌ಪಿಎಫ್‌ ಬಸ್‌ ಮೇಲೆ ಕಲ್ಲು ತೂರಾಟ: ಪ್ರಾಣ ರಕ್ಷಣೆಗಾಗಿ ಯೋಧರ ಪರದಾಟ

ಬನಿಹಾಲ್‌:ಜೂ-15: ಸಿಆರ್‌ಪಿಎಫ್‌ ಬಸ್‌ ಮೋಟರ್‌ಸೈಕಲ್‌ಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಿ, ಸ್ಥಳೀಯರು ಬಸ್‌ ಮೇಲೆ ಕಲ್ಲುತೂರಾಟ ನಡೆಸಿದ ಘಟನೆ ಜಮ್ಮು-ಕಾಶ್ಮೀರದ ಬನಿಹಾಲ್‌ದಲ್ಲಿ ನಡೆದಿದೆ.

ಬನಿಹಾಲ್‌ನಲ್ಲಿ ಗುಂಪೊಂದು ಈ ಕೃತ್ಯ ಎಸಗಿದೆ. ಇಲ್ಲಿ ಮೋಟರ್‌ಸೈಕಲ್‌ಗೆ ಸಿಆರ್‌‌ಪಿಎಫ್‌ ಯೋಧರಿದ್ದ ಬಸ್‌‌ ಡಿಕ್ಕಿ ಹೊಡೆದಿದೆ ಎಂಬ ಕಾರಣವೊಡ್ಡಿ ಗುಂಪು ಇದ್ದಕ್ಕಿದ್ದಂತೆ ಬಸ್‌ ಮೇಲೆ ಕಲ್ಲು ತೂರಾಟ ನಡೆಸಲಾರಂಭಿಸಿತು. ಇದರಿಂದ ವಿಚಲಿತರಾದ ಯೋಧರು ಪ್ರಾಣ ರಕ್ಷಣೆಗೆ ಬಸ್‌ನೊಳಗೆ ಪರದಾಡಬೇಕಾಯಿತು.

ಮೇ 27 ರಂದು ವಾಹನದ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದರಿಂದ ವಾಹನ ರಸ್ತೆಯಲ್ಲೇ ಸ್ಕಿಡ್‌ ಆಗಿ ನೆಲಕ್ಕುರುಳಿತ್ತು. ಪರಿಣಾಮ 19 ಯೋಧರು ಗಾಯಗೊಂಡಿದ್ದಾರೆ.

ಕಾಶ್ಮೀರದಲ್ಲಿ ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

Stone-pelters attack CRPF convoy after its bus hits bike in J&K

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ