ಗರ್ಭಿಣಿ ಎಂದು ಸುಳ್ಳು ಹೇಳಿ ನಂಬಿಸಿ ರೋಗಿಯಿಂದ ಬರೋಬ್ಬರಿ 9 ತಿಂಗಳು ಹಣ ಪೀಕಿ ವೈದ್ಯೆ

 

ಬೆಂಗಳೂರು,ಜೂ.15-ವೈದ್ಯೋ ನಾರಾಯಣೋ ಹರಿ… ವೈದ್ಯರನ್ನು ದೇವರೆಂದು ಭಾವಿಸುತ್ತಾರೆ. ಆದರೆ ವೈದ್ಯರು ಸುಳ್ಳು ಹೇಳಿ ರೋಗಿಗಳಿಂದ ಹಣ ಪೀಕುತ್ತಾರೆ. ಆದರೆ ಈ ಮಹಾನ್ ವೈದ್ಯೆ ಕೃಷ್ಣ ಕ್ಲಿನಿಕ್‍ನ ಡಾ.ಗೀತಾ ಅಮಾಯಕ ರೋಗಿ ಪ್ರೇಮ ಅವರ ಜೀವದ ಜೊತೆಯಲ್ಲ ಜೀವನದ ಜೊತೆ ಚೆಲ್ಲಾಟವಾಡಿದ್ದಾರೆ.

ಗರ್ಭಿಣಿ ಎಂದು ಸುಳ್ಳು ಹೇಳಿ ನಂಬಿಸಿ ಬರೋಬ್ಬರಿ 9 ತಿಂಗಳು ಹಣ ಪೀಕಿದ್ದಾರೆ. ಹೆರಿಗೆಗೆಂದು ಆಸ್ಪತ್ರೆಗೆ ಹೋದಾಗಲೇ ಗೊತ್ತಾಗಿದ್ದು ಪ್ರೇಮ ಅವರು ಗರ್ಭಿಣಿ ಅಲ್ಲವೆಂದು. ಇದನ್ನು ಕೇಳಿ ದಂಗಾಗಿದ್ದಾರೆ.
ಈ ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ಕೃಷ್ಣ ಕ್ಲಿನಿಕ್‍ಗೆ ಹೋಗಿ ಪ್ರಶ್ನಿಸಿದಾಗ ಈ ಮಹಾನ್ ವೈದ್ಯೆ ಚಿಕಿತ್ಸೆ ನೀಡಿದ್ದ ಚೀಟಿಗಳನ್ನೆಲ್ಲ ಕಸಿದುಕೊಂಡು ನೀವು ಯಾರು ನಮಗೆ ಗೊತ್ತೇ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.

ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನ ಬೆರಟಹಳ್ಳಿಯ ಪ್ರೇಮ ಎರಡು ವರ್ಷದ ಹಿಂದೆ ಪ್ರಕಾಶ್ ಎಂಬುವರನ್ನು ವಿವಾಹವಾಗಿದ್ದರು. ಎರಡು ವರ್ಷದಿಂದ ಮಕ್ಕಳಾಗಿಲ್ಲ ಎಂದು ಕೃಷ್ಣ ಆಸ್ಪತ್ರೆಗೆ ತೆರಳಿದಾಗ ಪ್ರೇಮ ಗರ್ಭಿಣಿ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರೇಮ ಅವರಿಗೆ ಮಗುವಾಗುತ್ತದೆ ಎಂದು ಅವರ ಕುಟುಂಬದವರೆಲ್ಲ ಸಂಭ್ರಮದಲ್ಲಿ ಮೂರು,ನಾಲ್ಕು , ಐದು ತಿಂಗಳು ಹೀಗೆ ತಿಂಗಳಾಗುತ್ತಿದ್ದಂತೆ ಮನೆಯವರೆಲ್ಲ ಖುಷಿಪಟ್ಟು ಸೀಮಂತವನ್ನೂ ಮಾಡಿದ್ದಾರೆ.

ಗುರುವಾರ ಮಗುವಾಗುತ್ತದೆ ಎಂದು ವೈದ್ಯರು ದಿನಾಂಕವನ್ನೂ ನಿಗದಿಪಡಿಸಿದ್ದಾರೆ. ಹಾಗಾಗಿ ಪ್ರೇಮ ಅವರು ನಂಜನೂಡಿನ ಸರ್ಕಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಅಲ್ಲಿ ಪ್ರೇಮ ಗರ್ಭಿಣಿಯೇ ಅಲ್ಲ ಎಂಬ ವಿಚಾರ ತಿಳಿದುಬಂದಿದೆ. ಅವರ ಹೊಟ್ಟೆಯಲ್ಲಿ ಇರುವುದು ಗಂಟು ಎಂದು ವೈದ್ಯರು ತಿಳಿಸಿದ್ದಾರೆ.
ಹಾಗಾದರೆ ನಂಜನಗೂಡಿನ ಕೃಷ್ಣ ಕ್ಲಿನಿಕ್‍ನ ಡಾ.ಗೀತಾ ಅವರು ಚಿಕಿತ್ಸೆಯನ್ನು ಗಂಟಿಗೆ ನೀಡಿ ಅಮಾಯಕರನ್ನು ವಂಚಿಸಿದ್ದಾರೆ. ವೈದ್ಯರನ್ನು ನಂಬಿ ಮೋಸ ಹೋದರೇ?
ಈ ಸಂಬಂಧ ನಂಜನಗೂಡು ಪಟ್ಟಣ ಪೆÇಲೀಸ್ ಠಾಣೆಯಲ್ಲಿ ವೈದ್ಯೆ ಗೀತಾ ವಿರುದ್ಧ ದೂರು ದಾಖಲಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ