ಜೂ.21ರಂದು ವಿಧಾನಪರಿಷತ್‍ನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹಾಗೂ ಉಪಸಭಾಪತಿ ಮರಿತಿಬ್ಬೇಗೌಡ ನಿವೃತ್ತಿ

 

ಬೆಂಗಳೂರು, ಜೂ.14- ರಾಜ್ಯ ವಿಧಾನಪರಿಷತ್‍ನ ಸಭಾಪತಿ ಹಾಗೂ ಉಪಸಭಾಪತಿ ಜೂ.21ರಂದು ನಿವೃತ್ತಿಯಾಗಲಿದ್ದಾರೆ.
ವಿಧಾನಪರಿಷತ್‍ನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹಾಗೂ ಉಪಸಭಾಪತಿ ಮರಿತಿಬ್ಬೇಗೌಡ ಅವರು ಜೂ.21ರಂದು ನಿವೃತ್ತಿಯಾಗುತ್ತಿದ್ದು, ವಿಧಾನಪರಿಷತ್‍ಗೆ ಹಂಗಾಮಿ ಸಭಾಪತಿಯನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ.

ಜುಲೈ 17ರಂದು ವಿಧಾನಪರಿಷತ್ ಸದಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ಎಂ.ಆರ್.ಸೀತಾರಾಮ್, ಮೋಟಮ್ಮ, ಡಿ.ಎಸ್.ವೀರಯ್ಯ, ರಘುನಾಥರಾವ್ ಮಲ್ಕಾಪುರೆ, ಭಾನುಪ್ರಕಾಶ್, ಕೆ.ಗೋವಿಂದರಾಜ್, ಸಿ.ಎಂ.ಇಬ್ರಾಹಿಂ. ಜೂ.21ರಂದು ರಾಮಚಂದ್ರಗೌಡ, ಅರಮನಾಥ್‍ಪಾಟೀಲ್, ಗಣೇಶ್‍ಕಾರ್ಣಿಕ್, ರಮೇಶ್‍ಬಾಬು ನಿವೃತ್ತಿಯಾಗುತ್ತಿದ್ದಾರೆ.
ಇತ್ತೀಚೆಗೆ ವಿಧಾನಸಭೆ ಸದಸ್ಯರಿಂದ ವಿಧಾನಪರಿಷತ್‍ಗೆ ನಡೆದ ಚುನಾವಣೆಯಲ್ಲಿ ರಘುನಾಥರಾವ್ ಮಲ್ಕಾಪುರೆ, ಕೆ.ಗೋವಿಂದರಾಜ್, ಸಿ.ಎಂ.ಇಬ್ರಾಹಿಂ ಚುನಾಯಿತರಾಗಿದ್ದಾರೆ. ಮರಿತಿಬ್ಬೇಗೌಡ ಕೂಡ ಈಗಾಗಲೇ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ