ಅಂದರ್‍ಬಾಹರ್ ಜೂಜಾಟದ ಅಡ್ಡೆ ಮೇಲೆ ಸಿಸಿಬಿ ಪೆÇಲೀಸರು ದಾಳಿ ಒಂದು ಲಕ್ಷ ರೂ. ಹಣ

 

ಬೆಂಗಳೂರು, ಜೂ.2- ಅಂದರ್‍ಬಾಹರ್ ಜೂಜಾಟದ ಅಡ್ಡೆ ಮೇಲೆ ಸಿಸಿಬಿ ಪೆÇಲೀಸರು ದಾಳಿ ಮಾಡಿ ಆರು ಮಂದಿಯನ್ನು ಬಂಧಿಸಿ ಒಂದು ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ.
ರಮೇಶ್, ಸುಧಾಕರ್, ಪ್ರವೀಣ್, ಬಾಬು, ನಾರಾಯಣಮೂರ್ತಿ ಮತ್ತು ಭರತ್ ಬಂಧಿತ ಜೂಜುಕೋರರಾಗಿದ್ದು, ಇವರಿಂದ 1,02,000ರೂ. ವಶಪಡಿಸಿಕೊಂಡಿದ್ದಾರೆ.
ಬಾಣಸವಾಡಿ ವ್ಯಾಪ್ತಿಯ ಕಲ್ಯಾಣ ನಗರದ ಎಚ್‍ಆರ್‍ಬಿಆರ್ ಲೇಔಟ್ ಒಂದನೇ ಬ್ಲಾಕ್‍ನ ಹೋಟೆಲ್‍ವೊಂದರ ರೂಂನ್ನು ಬಾಡಿಗೆಗೆ ಪಡೆದು ಜೂಜಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೆÇಲೀಸರು ಹೋಟೆಲ್ ಮೇಲೆ ದಾಳಿ ಮಾಡಿ ಆರು ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ